Advertisement

Election 2023: ಶುಭ ಸಮಾರಂಭಗಳ ಮೇಲೆ ಆಯೋಗದ ಕಣ್ಣು !

12:17 AM Apr 10, 2023 | Team Udayavani |

ಉಡುಪಿ: ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು ಮತದಾರರ ಗಮನ ಸೆಳೆಯಲು ರಾಜಕೀಯ ಪಕ್ಷದ ಅಭ್ಯರ್ಥಿ ಗಳು ಮತ್ತವರ ಬೆಂಬಲಿಗರು ನಾನಾ ರೀತಿಯ ತಂತ್ರಗಳನ್ನು ರೂಪಿಸುತ್ತಿದ್ದಾರೆ. ಈ ಕಾರಣಕ್ಕೆ ಮದುವೆ ಸಹಿತ ಇತರ ಶುಭ ಸಮಾರಂಭಗಳ ಮೇಲೆ ಚುನಾವಣೆ ಆಯೋಗ ತೀವ್ರ ನಿಗಾ ಇರಿಸಿದೆ.
ಶುಭ ಸಮಾರಂಭಗಳಲ್ಲಿ ಊಟೋಪ ಚಾರ, ಉಡುಗೊರೆಗಳ ನೆಪದಲ್ಲಿ ಮತ ದಾರರಿಗೆ ಆಮಿಷ ಒಡ್ಡುವ ಸಾಧ್ಯತೆ ಗಳು ಅಧಿಕವಾಗಿರುವುದರಿಂದ ಫ್ಲೈಯಿಂಗ್‌ ಸ್ಕ್ವಾಡ್‌ ಟೀಮ್‌, ಸ್ಟಾಟಿಕ್‌ ಸರ್ವೆಲೆನ್ಸ್‌ ಟೀಮ್‌, ವೀಡಿಯೋ ಸರ್ವೆಲೆನ್ಸ್‌ ಟೀಮ್‌, ಸೆಕ್ಟರ್‌ ಆಫೀಸರ್‌ ಟೀಮ್‌, ವೀಡಿಯೋ ವ್ಹೀವಿಂಗ್‌ ಟೀಮ್‌, ಎಂಸಿಸಿ ನೋಡಲ್‌ ಆಫೀಸರ್‌, ಅಕೌಂಟ್‌ ಎಕ್ಸ್‌ ಪೆಂಡಿಚರ್‌ ಟೀಮ್‌ಗಳು ಈ ಬಗ್ಗೆ ಕಾರ್ಯೋನ್ಮುಖವಾಗಿದೆ.

Advertisement

ಅಲ್ಲಲ್ಲಿ ನಡೆಯುವ ಶುಭ ಕಾರ್ಯ ಕ್ರಮಗಳಿಗೆ ಆಯೋಗದ ತಂಡ ದಿಢೀರ್‌ ಭೇಟಿ ನೀಡಿ ಪರಿಶೀಲಿಸಬಹುದು. ಅಗತ್ಯ ಬಿದ್ದಲ್ಲಿ ವೀಡಿಯೋ ಚಿತ್ರೀಕರಣವನ್ನು ಮಾಡಲಿದ್ದು, ಮತಯಾಚನೆ, ರಾಜಕೀಯ ಚಟುವಟಿಕೆ, ಮತ ಪ್ರಚಾರ ಪ್ರಕ್ರಿಯೆಗಳು ಕಂಡು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಚುನಾವಣಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಕೋಲ, ಜಾತ್ರೆ, ಉತ್ಸವ ನಡೆಸುವವರಿಗೆ ಚುನಾವಣೆ ಪ್ರಕ್ರಿಯೆಗಳಿಂದ ತೊಂದರೆ ಯಾಗದು. ಯಕ್ಷಗಾನ, ಮೆಹಂದಿ ಸಮಾರಂಭಗಳೂ ಸಂಜೆ 6ರಿಂದ 10ರೊಳಗೆ ನಡೆಯಬೇಕು. ಕಲ್ಯಾಣ ಮಂಟಪ, ಸಮುದಾಯ ಭವನ ಗಳಲ್ಲಿ ನಡೆಯುವ ಅದ್ದೂರಿ ಸಮಾರಂಭ ಗಳಿಗೆ ಅನುಮತಿ ಪಡೆಯುವುದು ಅಗತ್ಯ.
ಕುಟುಂಬದೊಳಗಿನ ಕಾರ್ಯಕ್ರಮಕ್ಕೆ ಅನುಮತಿ ಬೇಕಿಲ್ಲ ಕುಟುಂಬದೊಳಗೆ ಮನೆಗಳಲ್ಲಿ ನಡೆ ಯುವ ಕಾರ್ಯಕ್ರಮಗಳಿಗೆ ಅನುಮತಿ ಅಗತ್ಯವಿಲ್ಲ. ವೈಯಕ್ತಿಕ ಕಾರ್ಯ ಕ್ರಮಗಳನ್ನು ಆಯೋಜಿಸಲು ಯಾವುದೇ ಆತಂಕ, ಗೊಂದಲ ಪಡುವ ಅಗತ್ಯವಿಲ್ಲ. ಈ ಕಾರ್ಯಕ್ರಮಗಳು ರಾಜಕೀಯ ಚಟುವಟಿಕೆಯಿಂದ ಮುಕ್ತವಾಗಿರಬೇಕು ಎಂದು ಚುನಾವಣೆ ಆಯೋಗ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next