Advertisement

Mangaluru ವೃದ್ಧ ದಂಪತಿಗೆ ಹಲ್ಲೆ; ಚರ್ಚ್‌ ಧರ್ಮಗುರು ವಜಾ

09:56 PM Mar 02, 2024 | Team Udayavani |

ಮಂಗಳೂರು: ಬಂಟ್ವಾಳ ತಾಲೂಕು ವಿಟ್ಲ ಪೊಲೀಸ್‌ ಠಾಣಾ ವ್ಯಾಪ್ತಿಯ ಪುಣಚ ಗ್ರಾಮದ ಪೆರಿಯಾಲ್ತಡ್ಕದಲ್ಲಿ ವೃದ್ಧ ದಂಪತಿಯ ಮೇಲೆ ಹಲ್ಲೆ ನಡೆಸಿದ ಕ್ರೈಸ್ಟ್‌ ದ ಕಿಂಗ್‌ ಚರ್ಚ್‌ನ ಫಾ| ನೆಲ್ಸನ್‌ ಒಲಿವೆರಾ ಅವರನ್ನು ಮಂಗಳೂರು ಧರ್ಮ ಪ್ರಾಂತದ ರಿಲೀಜಿಯಸ್‌ ಮಿನಿಸ್ಟ್ರಿಯಿಂದ ವಜಾಗೊಳಿಸಲಾಗಿದೆ.

Advertisement

ಮಂಗಳೂರು ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕಾಧಿಕಾರಿ ಫಾ| ಜೆ.ಬಿ. ಸಲ್ಡಾನಾ ಮತ್ತು ರಾಯ್‌ ಕ್ಯಾಸ್ಟಲಿನೋ ಅವರು ಈ ಕುರಿತಂತೆ ಪತ್ರಿಕಾ ಪ್ರಕಟನೆ ಮೂಲಕ ಕ್ಷಮೆಯಾಚಿಸಿದ್ದಾರೆ. ಫೆ. 29ರಂದು ಚರ್ಚ್‌ನ ಅವರಣದಲ್ಲಿಯೇ ನಡೆದ ಘಟನೆಯ ಸಿಸಿಟಿವಿ ವೀಡಿಯೋ ವೈರಲ್‌ ಆಗಿತ್ತು. ಈ ಪ್ರಕರಣ ದೇಶದ ಕಾನೂನು ಮತ್ತು ಸುವ್ಯವಸ್ಥೆಯ ಚೌಕಟ್ಟಿನಲ್ಲಿ ಬರುವುದರಿಂದ ಧರ್ಮಪ್ರಾಂತವು ತನಿಖೆಯ ಸಂದರ್ಭ ಎಲ್ಲ ರೀತಿಯ ಸಹಕಾರ ನೀಡಲಿದೆ.

ಧರ್ಮಪ್ರಾಂತ ವತಿಯಿಂದಲೂ ಈ ಬಗ್ಗೆ ತನಿಖೆ ನಡೆಸಲಾಗುವುದು. ಚರ್ಚ್‌ಗೆ ಇನ್ನೊಬ್ಬರು ಧರ್ಮ ಗುರುವನ್ನು ನಿಯೋಜಿಸಲಾಗುವುದು ಎಂದವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next