Advertisement

ಮಹಾರಾಷ್ಟ್ರ ಶಿವಸೇನಾ ಶಾಸಕಾಂಗ ಪಕ್ಷದ ನಾಯಕನಾಗಿ ಏಕ್ ನಾಥ್ ಶಿಂಧೆ ಆಯ್ಕೆ

10:13 AM Nov 01, 2019 | Team Udayavani |

ಮುಂಬೈ: ಹಿರಿಯ ನಾಯಕ ಏಕ್ ನಾಥ್ ಶಿಂಧೆಯನ್ನು ಶಿವಸೇನಾದ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಗುರುವಾರ ಆಯ್ಕೆ ಮಾಡಿದೆ. ಶಿಂಧೆ ಹೆಸರನ್ನು ಆದಿತ್ಯ ಠಾಕ್ರೆ ಪ್ರಸ್ತಾಪಿಸಿರುವುದಾಗಿ ವರದಿ ತಿಳಿಸಿದೆ.

Advertisement

ಶಿಂಧೆ ಪ್ರಸ್ತುತ ಮಹಾರಾಷ್ಟ್ರ ಸರಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದರು. ಇವರು ಥಾಣೆಯ ಕೋಪ್ರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. 2004, 2009 ಹಾಗೂ 2014ರ ಚುನಾವಣೆಯಲ್ಲಿ ಸತತವಾಗಿ ಮಹಾರಾಷ್ಟ್ರ ವಿಧಾನಸಭೆಗೆ ಆಯ್ಕೆಯಾಗಿದ್ದರು. ಶಿಂಧೆ ಅವರನ್ನು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿವಸೇನಾದ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಎರಡನೇ ಬಾರಿ ಆಯ್ಕೆ ಮಾಡಿದಂತಾಗಿದೆ.

ಇಂದು ಸಂಜೆಯೊಳಗೆ ಶಿಂಧೆ, ಆದಿತ್ಯ ಠಾಕ್ರೆ ಮತ್ತು ಶಿವಸೇನಾದ ಇತರ ಮುಖಂಡರು ಮಹಾರಾಷ್ಟ್ರ ರಾಜ್ಯಪಾಲರನ್ನು ಭೇಟಿಯಾಗಿ ಮಾತುಕತೆ ನಡೆಸುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next