Advertisement

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

01:13 AM Sep 17, 2024 | Team Udayavani |

ಉಳ್ಳಾಲ: ಸಮಾನತೆ, ಸಹೋದರತೆ ಏಕತೆಯ ಸಂದೇಶವನ್ನು ಇಸ್ಲಾಂ ಸಾರಿದೆ. ಸಾವಿರದ ಐನೂರು ವರ್ಷಗಳ ಹಿಂದೆ ಪ್ರವಾದಿಯವರು ಸಾರಿದ ಸಂದೇಶ ಇಂದಿಗೂ ಪ್ರಸ್ತುತ. ಈದ್‌ ಮೆರವಣಿಗೆ ಸಮಾನತೆಯ ಸಂದೇಶ ನೀಡುವ ಜಾಥಾ ಆಗಿದೆ ಎಂದು ಸ್ಪೀಕರ್‌ ಯು.ಟಿ. ಖಾದರ್‌ ಹೇಳಿದರು.

Advertisement

ಅವರು ಈದ್‌ ಮಿಲಾದ್‌ ಪ್ರಯುಕ್ತ ಕೋಟೆಪುರದಿಂದ ಮುಕ್ಕಚೇರಿ ಅಜಾದ್‌ ನಗರ ರಸ್ತೆಯಾಗಿ ಉಳ್ಳಾಲ ದರ್ಗಾಕ್ಕೆ ನಡೆದ ಕಾಲ್ನಡಿಗೆ ಜಾಥಾವನ್ನು ಉದ್ಘಾಟಿಸಿ ಮಾತನಾಡಿದರು. ದರ್ಗಾ ಅಧ್ಯಕ್ಷ ಬಿ.ಜಿ. ಹನೀಫ್‌, ಉಳ್ಳಾಲ ಕೇಂದ್ರ ಜುಮ್ಮಾ ಮಸೀದಿ ಖತೀಬ್‌ ಇಬ್ರಾಹಿಂ ಸ ಅದಿ, ಕೋಟೆಪುರ ಮಸೀದಿ ಖತೀಬರಾದ ಇರ್ಷಾದ್‌ ಸಖಾಫಿ, ಸಯ್ಯದ್‌ ಮದನಿ ಅರಬಿಕ್‌ ಕಾಲೇಜು ಪ್ರಾಂಶುಪಾಲರಾದ ಅಹ್ಮದ್‌ ಕುಟ್ಟಿ ಸಖಾಫಿ, ಮುಹಮ್ಮದ್‌ ಫೈಝಿ ಮೋಂಗಮ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next