Advertisement

ಪ್ರವಾಹಪೀಡಿತ ಈಜಿಪ್ಟ್ ನಲ್ಲೀಗ “ಚೇಳು’ಕಾಟ!

11:39 PM Nov 15, 2021 | Team Udayavani |

ಕೈರೋ: ಭಾರೀ ಮಳೆ ಹಾಗೂ ಪ್ರವಾಹದಿಂದ ಸಂಕಷ್ಟ ಎದುರಿಸುತ್ತಿರುವ ಈಜಿಪ್ಟ್ಈಗ ಚೇಳು ಕಾಟ ಶುರುವಾಗಿದೆ. ಇಲ್ಲಿನ ದಕ್ಷಿಣದ ಅಸ್ವಾನ್‌ ನಗರದಲ್ಲಿ ಮಳೆಯಿಂದಾಗಿ ಚೇಳುಗಳೆಲ್ಲ ಮನೆಗಳಲ್ಲಿ ಆಶ್ರಯ ಪಡೆಯುತ್ತಿದ್ದು, ಚೇಳು ಕಡಿತದಿಂದ ಕನಿಷ್ಠ 3 ಮಂದಿ ಸಾವಿಗೀಡಾಗಿದ್ದಾರೆ. ಅಷ್ಟೇ ಅಲ್ಲ, 450ಕ್ಕೂ ಅಧಿಕ ಮಂದಿ ಚೇಳು ಕಡಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Advertisement

ಹೀಗಾಗಿ, ಎಲ್ಲ ಶಾಲೆಗಳಿಗೂ ರಜೆ ಘೋಷಿಸಲಾಗಿದ್ದು, ಯಾರೂ ಮನೆಗಳಿಂದ ಹೊರಬರದಂತೆ ಸೂಚಿಸಲಾಗಿದೆ. ಎಲ್ಲ ಆಸ್ಪತ್ರೆಗಳಲ್ಲೂ ಕೊರೊನಾ ಲಸಿಕೆ ವಿತರಣೆಯನ್ನು ಸ್ಥಗಿತಗೊಳಿಸಿ, ಚೇಳು ಕಡಿತದಿಂದ ದಾಖಲಾದವರಿಗೆ ಆದ್ಯತೆ ಮೇರೆಗೆ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ:ದಾಂಪತ್ಯಕ್ಕೆ ಕಾಲಿಟ್ಟ ರಾಜ್‌ಕುಮಾರ್‌ ರಾವ್‌-ಪತ್ರಲೇಖಾ

ಪ್ರತಿ ಬಾರಿಯೂ ಇಲ್ಲಿ ಮಳೆ ಅತಿಯಾಗಿ, ಪ್ರವಾಹ ಉಂಟಾದಾಗ ಭಾರೀ ಪ್ರಮಾಣದ ಚೇಳುಗಳು ಕೊಚ್ಚಿಕೊಂಡು ಬರುತ್ತವೆ. ಏಕೆಂದರೆ ಅಸ್ವಾನ್‌ನ ಪರ್ವತ ಪ್ರದೇಶಗಳು ದಪ್ಪನೆಯ ಬಾಲವನ್ನು ಹೊಂದಿರುವ 4 ಇಂಚು ಉದ್ದದ ಅರೇಬಿಯನ್‌ ಚೇಳುಗಳ ಆವಾಸಸ್ಥಾನವಾಗಿದೆ. ಈ ವಿಷಜಂತುಗಳು ಪ್ರತಿ ವರ್ಷ ಹಲವು ಮಂದಿಯನ್ನು ಬಲಿಪಡೆಯುತ್ತದೆ. ಇವುಗಳನ್ನು ಜಗತ್ತಿನಲ್ಲೇ ಅತ್ಯಂತ ವಿಷಕಾರಿ ಚೇಳುಗಳು ಎಂದು ಕರೆಯಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next