Advertisement

ಅಕ್ಕಿ ತರುವ ಪ್ರಯತ್ನ ನಿರಂತರ: ಸಚಿವ ಕೆ.ಎಚ್‌.ಮುನಿಯಪ್ಪ

11:49 PM May 23, 2024 | Team Udayavani |

ಬೆಂಗಳೂರು: ಅಕ್ಕಿ ತರುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದ್ದು, ಅಲ್ಲಿಯವರೆಗೆ ಅಕ್ಕಿ ಬದಲಿಗೆ ಫ‌ಲಾನುಭವಿಗಳಿಗೆ ನಗದು ನೀಡುವ ಕಾರ್ಯಕ್ರಮ ಮುಂದುವರಿಯಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌.ಮುನಿಯಪ್ಪ ತಿಳಿಸಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಪಡಿತರ ಚೀಟಿ ತಿದ್ದುಪಡಿ ವೇಳೆ ತಾಂತ್ರಿಕ ಅಡಚಣೆ ಬಗ್ಗೆ ಚುನಾವಣೆ ನೀತಿ ಸಂಹಿತೆ ಬಳಿಕ ಚರ್ಚಿಸುತ್ತೇನೆ. ಈ ಮಧ್ಯೆ ಅಕ್ಕಿ ತರುವ ಪ್ರಯತ್ನ ನಿರಂತರವಾಗಿ ನಡೆದಿದೆ ಎಂದು ಸ್ಪಷ್ಟಪಡಿಸಿದರು. ಕಾಂಗ್ರೆಸ್‌ ಬಂದರೆ ಮಳೆ ಬರುವುದಿಲ್ಲ ಅಂತ ಬಿಜೆಪಿಯವರು ಹೇಳುತ್ತಿದ್ದರು. ಈ ಬಾರಿ ವಾಡಿಕೆಗಿಂತ ಶೇ. 58ರಷ್ಟು ಹೆಚ್ಚು ಮಳೆಯಾಗಿದೆ ಎಂದು ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next