Advertisement

ಮಕ್ಕಳನ್ನು ಅವಮಾನಿಸಬೇಡಿ…ಮುಗ್ಧ ಮನಸ್ಸಿನ ಮೇಲೆ ಪರಿಣಾಮ!

11:45 AM Nov 28, 2020 | Nagendra Trasi |

ಮಕ್ಕಳು ತಂಟೆ ತಕರಾರು ಮಾಡುತ್ತಲೇ ಇರುತ್ತಾರೆ. ಹಾಗಂತ ಸಾರ್ವಜನಿಕ ಸ್ಥಳಗಳಲ್ಲಿ, ಮನೆಗೆ ಬಂದ ಅತಿಥಿಗಳ ಎದುರು ಬಯ್ಯುವುದು ಸರಿಯಲ್ಲ. ಇದು ಮಕ್ಕಳ ಮುಗ್ಧ ಮನಸ್ಸಿನ ಮೇಲೆ ಸಾಕಷ್ಟು ಪರಿಣಾಮ ಬೀರುವುದು.

Advertisement

ಎಲ್ಲರ ಮುಂದೆ ಮಕ್ಕಳನ್ನು ಬೈಯ್ದರೆ ಅವರು ಮುಂದೆ ಆಕ್ರಮಣಕಾರಿ ನಡವಳಿಕೆಯನ್ನು ಬೆಳೆಸಿಕೊಳ್ಳುವ ಸಾಧ್ಯತೆ ಇದೆ. ಮುಗ್ಧ ಮನಸ್ಸು ಮಣ್ಣಿನಂತೆ. ಅದರ ಮೇಲೆ ನಾಟಿದ ಭಾವನೆಯನ್ನು ಅವರು ಅನುಸರಿಸುತ್ತಾರೆ.

ಎಲ್ಲರೆದುರು ಬೈಯುತ್ತಿದ್ದರೆ ಅಥವಾ ಖಂಡಿಸಿದರೆ ಮಕ್ಕಳು ತಮ್ಮ ಗೆಳೆಯರೊಂದಿಗೂ ಅದೇ ರೀತಿ ವರ್ತಿಸುತ್ತಾರೆ. ಇದು ಅವರ ಮನಸ್ಸಿನ ಹತಾಶೆಯನ್ನು ಹೊರ ಹಾಕುವ ಮಾರ್ಗವಾಗತೊಡಗುತ್ತದೆ. ಎಲ್ಲರೆದುರು ಅವಮಾನ ಮಾಡಿದಾಗ ಮುಜುಗರ ಉಂಟಾಗಿ ಸಾರ್ವಜನಿಕ ಸ್ಥಳಗಳಿಂದ ದೂರವಿರಲು ಬಯಸುತ್ತದೆ.

ಎಲ್ಲರೆದುರು ಮಕ್ಕಳನ್ನು ಬಯ್ಯುವುದರಿಂದ ಪೋಷಕರು ಮಕ್ಕಳ ವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ. ಪರಿಣಾಮವಾಗಿ ಮುಂದೆ ಮಕ್ಕಳು ಮುಕ್ತ ಮನಸ್ಸಿನಿಂದ ತಮ್ಮ ಭಾವನೆಗಳನ್ನು ಪ್ರಕಟಿಸದೇ ಇರುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ:ಇರಾನ್ ನ ಪ್ರಮುಖ ನ್ಯೂಕ್ಲಿಯರ್ ವಿಜ್ಞಾನಿ ಹತ್ಯೆ: ಇಸ್ರೇಲ್ ಕೈವಾಡ ಶಂಕೆ?

Advertisement

ಎಲ್ಲರೆದುರು ಮಕ್ಕಳನ್ನು ಬಯ್ಯುವುದರಿಂದ ಮುಗ್ಧ ಮನಸ್ಸಿನ ಮೇಲೆ ಅಘಾತವಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ಅದಷ್ಟು ಇದನ್ನು ತಪ್ಪಿಸುವುದು ಒಳ್ಳೆಯದು. ಎಲ್ಲರೆದುರು ನಯವಾಗಿ ತಿಳಿಸಿ. ಕೇಳದೇ ಇದ್ದರೆ ಅವರನ್ನು ದೂರ ಕರೆದುಕೊಂಡು ಹೋಗಿ ನಿಧಾನವಾಗಿ ಮನಸ್ಸಿಗೆ ನಾಟುವಂತೆ ಮಾತನಾಡಿ. ಮತ್ತೆ ಈ ತಪ್ಪು ಆಗ ಬಾರದು ಎಂದು ಎಚ್ಚರಿಸಿ. ಆಗ ಮಗು ತನ್ನ ತಪ್ಪನ್ನು ತಿದ್ದಿಕೊಂಡು ಎಲ್ಲರೆದುರು ಸ್ವಾಭಿಮಾನದಿಂದ ಹಾಗೂ ಧೈರ್ಯದಿಂದ ಬಂದು ನಿಲ್ಲುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next