Advertisement

ಕಸ ಎಂದು ಎಸೆಯಬೇಡಿ : ಈರುಳ್ಳಿ ಸಿಪ್ಪೆಯಲ್ಲಿದೆ ಆರೋಗ್ಯದ ಗುಟ್ಟು

01:17 PM Apr 06, 2021 | Team Udayavani |

ಪ್ರತಿನಿತ್ಯ ಅಡುಗೆಗೆ ಈರುಳ್ಳಿ ಬೇಕೇ ಬೇಕು. ಈರುಳ್ಳಿ ಇಲ್ಲದಿದ್ದರೆ ರುಚಿಯಾದ ತಿಂಡಿ ಪದಾರ್ಥಗಳನ್ನು ಸಿದ್ಧಪಡಿಸುವುದು ಕಷ್ಟ. ರುಚಿಯಾದ, ಸ್ವಾದಿಷ್ಟವಾದ ಅಡುಗೆ ತಯಾರಾಗಬೇಕಾದರೆ ಈರುಳ್ಳಿ ಬಹುಮುಖ್ಯ.

Advertisement

ಮಾರುಕಟ್ಟೆಯಿಂದ ತರುವ ಈರುಳ್ಳಿ ಕಟ್ ಮಾಡೋವಾಗ ಅದರ ಸಿಪ್ಪೆ ತೆಗೆದು ಹೊರಗೆ ಎಸೆಯುತ್ತೇವೆ. ಉಪಯೋಗಕ್ಕೆ ಬಾರದ ಕಸ ಎಂದು ಪರಿಗಣಿಸುತ್ತೇವೆ. ಆದರೆ, ಯಾವುದಕ್ಕೂ ಪ್ರಯೋನಕ್ಕಿಲ್ಲ ಎಂದು ನಾವು ಭಾವಿಸುವ ಈರುಳ್ಳಿ ಸಿಪ್ಪೆಯಲ್ಲಿಯೂ ಕೂಡ ಕೆಲವು ಆರೋಗ್ಯಕಾರಿ ಗುಣಗಳಿವೆ.

ಹೌದು, ಈರುಳ್ಳಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈರುಳ್ಳಿಯನ್ನು ನಾವು ಅಡುಗೆಗೆ ಬಳಸುತ್ತೇವೆ. ಆದರೆ ಅದರ ಸಿಪ್ಪೆಯನ್ನು ನಾವು ಎಸೆಯುತ್ತೇವೆ. ಆದರೆ ಈ ಸಿಪ್ಪೆಗಳಿಂದಲೂ ಕೂಡ ನಮ್ಮ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.

ಯಾವುದಕ್ಕೆಲ್ಲ ಉಪಯೋಗ ?

ಗಂಟಲು ನೋವು ನಿವಾರಣೆ :

Advertisement

ನಿಮಗೆ ಗಂಟಲು ನೋವು ಕಾಡುತ್ತಿದ್ದರೆ ಈರುಳ್ಳಿ ಸಿಪ್ಪೆಯನ್ನು ನೀರಿನಲ್ಲಿ ಕುದಿಸಿ ಸೇವನೆ ಮಾಡಿ. ಇದರಲ್ಲಿ ಉರಿಯೂತ ಶಮನ ಮಾಡುವ ಗುಣಗಳಿರುವುದರಿಂದ ಗಂಟಲು ನೋವು ಬೇಗ ಮಾಯವಾಗುತ್ತದೆ.

ತಲೆಕೂದಲು ಹೊಟ್ಟು ನಿವಾರಣೆ :

ಕೂದಲನ್ನು ಈರುಳ್ಳಿ ಸಿಪ್ಪೆಯನ್ನು ಹಾಕಿ ಕುದಿಸಿದ ನೀರಿನಲ್ಲಿ ತೊಳೆಯಿರಿ. ಇದರಿಂದ ತಲೆಹೊಟ್ಟು ಸಮಸ್ಯೆ ನಿವಾರಣೆಯಾಗುತ್ತದೆ. ಕೂದಲು ಉದ್ದವಾಗಿ ಹಾಗೂ ದಪ್ಪವಾಗಿ ಬೆಳೆಯುವಂತೆ ಸಹಕರಿಸುತ್ತದೆ.

ಸ್ನಾಯು ಸೆಳೆತ ಮಾಯ :

ಕಾಲು ನೋವು ಮತ್ತು ಸ್ನಾಯುಗಳಲ್ಲಿ ನೋವಿದ್ದರೆ ರಾತ್ರಿ ಮಲಗುವ ಮುನ್ನ ಈರುಳ್ಳಿ ಸಿಪ್ಪೆಯಿಂದ ತಯಾರಿಸಿದ ಚಹಾ ಕುಡಿಯಿರಿ. ಇದನ್ನು ಒಂದು ವಾರ ಮಾಡಿ ಖಂಡಿತವಾಗಿಯೂ ಕಾಲು ನೋವು ಹಾಗೂ ಸ್ನಾಯು ಸೆಳೆತಳಿದ್ದರೆ ನಿವಾರಣೆಯಾಗುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next