Advertisement

ಪ್ರಫ‌ುಲ್‌ಗೆ ಇ.ಡಿ ಸಮನ್ಸ್‌

12:35 AM Jun 02, 2019 | Team Udayavani |

ಮುಂಬಯಿ: ಯುಪಿಎ ಅವಧಿಯಲ್ಲಿ ನಡೆದ ನಾಗರಿಕ ವಿಮಾನಯಾನ ಹಗರಣ ಸಂಬಂಧ ಎನ್‌ಸಿಪಿ ಹಿರಿಯ ನಾಯಕ, ಮಾಜಿ ವಿಮಾನ ಯಾನ ಸಚಿವ ಪ್ರಫ‌ುಲ್‌ ಪಟೇಲ್‌ಗೆ ಜಾರಿ ನಿರ್ದೇಶನಾಲಯ ಸಮನ್ಸ್‌ ಜಾರಿ ಮಾಡಿದೆ. ಬಹುಕೋಟಿ ಭ್ರಷ್ಟಾಚಾರ ನಡೆಸಿ ಏರ್‌ಇಂಡಿಯಾಗೆ ಹಣಕಾಸು ನಷ್ಟ ಉಂಟು ಮಾಡಿದ ಆರೋಪದಲ್ಲಿ ಮುಂದಿನ ವಾರ ಅವರ ವಿಚಾರಣೆ ನಡೆಸಲಾಗುತ್ತದೆ.

Advertisement

ಜೂ.6 ರಂದು ವಿಚಾರಣೆಗೆ ಹಾಜರಾಗು ವಂತೆ ಅವರಿಗೆ ಇಡಿ ಆದೇಶಿಸಿದೆ. ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ ನಡೆದಿದ್ದ ಈ ಹಗರಣದಲ್ಲಿ ರಾಜಕೀಯ ನಾಯಕರೊಬ್ಬರ ವಿರುದ್ಧ ಕ್ರಮ ಕೈಗೊಳ್ಳುತ್ತಿರುವುದು ಇದೇ ಮೊದಲು. ವಿಮಾನಯಾನ ಲಾಬಿದಾರ ದೀಪಕ್‌ ತಲ್ವಾರ್‌ ವಿಚಾರಣೆ ವೇಳೆ ಬಾಯಿಬಿಟ್ಟ ಕೆಲವು ಮಾಹಿತಿಗಳನ್ನು ಆಧರಿಸಿ, ಸಮನ್ಸ್‌ ಜಾರಿ ಮಾಡಲಾಗಿದೆ.

ಇದೇ ವೇಳೆ, ಸಮನ್ಸ್‌ ಕುರಿತು ಪ್ರತಿಕ್ರಿಯಿಸಿರುವ ಪ್ರಫ‌ುಲ್‌ ಪಟೇಲ್‌, ನಾನು ಯಾವುದೇ ತಪ್ಪು ಮಾಡಿಲ್ಲ, ವಿಚಾರಣೆಯಲ್ಲಿ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next