Advertisement

ಪಶ್ಚಿಮಬಂಗಾಳ: ಮೊಬೈಲ್ ಆ್ಯಪ್ಲಿಕೇಶನ್ ವಂಚನೆ ಪ್ರಕರಣ; ಉದ್ಯಮಿ ಮನೆ ಮೇಲೆ ಇ.ಡಿ ದಾಳಿ

02:35 PM Sep 10, 2022 | Team Udayavani |

ಕೋಲ್ಕತ: ಮೊಬೈಲ್ ಆ್ಯಪ್ಲಿಕೇಶನ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಶನಿವಾರ (ಸೆಪ್ಟೆಂಬರ್ 10) ಪಶ್ಚಿಮಬಂಗಾಳದ ರಾಜಧಾನಿ ಕೋಲ್ಕತ ಸೇರಿದಂತೆ ಹಲವಾರು ಸ್ಥಳಗಳ ಮೇಲೆ ದಾಳಿ ನಡೆಸಿದೆ.

Advertisement

ಇದನ್ನೂ ಓದಿ:ಜನ ನಗುತ್ತಿದ್ದಾರೆ, ನೀವು ಕಾರ್ಯಕ್ರಮ ಮಾಡುತ್ತಿದ್ದೀರಿ: ಬಿಜೆಪಿಗೆ ಎಂ.ಬಿ.ಪಾಟೀಲ್

ಬ್ಯಾಂಕ್ ಅಧಿಕಾರಿಗಳು ಹಾಗೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡ, ಗಾರ್ಡನ್ ರೀಚ್ ಪ್ರದೇಶದಲ್ಲಿರುವ ಉದ್ಯಮಿ ನಾಸಿರ್ ಖಾನ್ ಗೆ ಸಂಬಂಧಪಟ್ಟ ಮನೆ ಮೇಲೆ ದಾಳಿ ನಡೆಸಿರುವುದಾಗಿ ವರದಿ ತಿಳಿಸಿದೆ.

ಮೂಲಗಳ ಪ್ರಕಾರ, ನಾಸಿರ್ ಖಾನ್ ಮನೆಯಲ್ಲಿ 7 ಕೋಟಿ ರೂಪಾಯಿ ನಗದು ಹಾಗೂ ಆಸ್ತಿ ಪಾಸ್ತಿಗಳ ದಾಖಲೆಗಳನ್ನು ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿದೆ. ಉದ್ಯಮಿ ನಾಸಿರ್ ನಿವಾಸದ ಮೇಲೆ ಇ.ಡಿ ದಾಳಿ ನಡೆಸುವ ಸಂದರ್ಭದಲ್ಲಿ ಕೇಂದ್ರ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು ಎಂದು ವರದಿ ವಿವರಿಸಿದೆ.

ಅಕ್ರಮ ಹಣಕಾಸು ವರ್ಗಾವಣೆಯಲ್ಲಿ ನಾಸಿರ್ ಶಾಮೀಲಾಗಿರುವುದಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next