Advertisement

ED Raids ಕೆಐಎಡಿಬಿ ಕಚೇರಿ ಮೇಲೆ ಇ.ಡಿ. ದಾಳಿ: ದಾಖಲೆ ವಶ

12:11 AM Aug 10, 2024 | Team Udayavani |

ಬೆಂಗಳೂರು: ಭೂ ಸ್ವಾಧೀನ ಹೆಸರಲ್ಲಿ ಅವ್ಯವಹಾರ ನಡೆಸಿರುವ ಪ್ರಕರಣದ ಸಂಬಂಧ ಬೆಂಗಳೂರಿನ ಖನಿಜ ಭವನದಲ್ಲಿರುವ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಕಚೇರಿ ಹಾಗೂ ಧಾರವಾಡದ ಕೆಐಎಡಿಬಿ ಕಚೇರಿಗೆ ಶುಕ್ರವಾರ ಬೆಳ್ಳಂಬೆಳಗ್ಗೆ ಜಾರಿ ನಿರ್ದೇಶನಾಲಯ (ಇ.ಡಿ.) ದಾಳಿ ನಡೆಸಿ ಹಲವು ದಾಖಲೆಗಳನ್ನು ಪರಿಶೀಲನೆ ನಡೆಸಿದೆ.

Advertisement

ಭೂ ಸ್ವಾಧೀನ ಹೆಸರಲ್ಲಿ ಒಂದೇ ಪ್ರದೇಶಗಳಿಗೆ 2 ಬಾರಿ ಪರಿಹಾರ ಒದಗಿಸುವಂತೆ ದಾಖಲೆಯಲ್ಲಿ ತೋರಿಸಿ ರೈತರ ಹೆಸರಲ್ಲಿ ನಕಲಿ ಬ್ಯಾಂಕ್‌ ಖಾತೆ ತೆರೆದು ಕೋಟ್ಯಂತರ ರೂ. ಅವ್ಯವಹಾರ ಮಾಡಿರುವುದು ಕಂಡು ಬಂದಿದೆ. ವ್ಯವಹಾರ ಮಾಡಲೆಂದೇ ಐಡಿಬಿಐ ಬ್ಯಾಂಕ್‌ನಲ್ಲಿ 24 ಖಾತೆಗಳನ್ನು ತೆರೆದಿರುವುದು ಮೇಲ್ನೋಟಕ್ಕೆ ಪತ್ತೆಯಾಗಿತ್ತು. ಇನ್ನು ಹುಬ್ಬಳ್ಳಿ ವಿಮಾನ ನಿಲ್ದಾಣ, ಧಾರವಾಡ ಕೆಲಗೇರಿ, ಮುಮ್ಮಿಗಟ್ಟಿ ಗ್ರಾಮಗಳಲ್ಲಿ ಭೂ ಸ್ವಾಧೀನ ಹೆಸರಲ್ಲಿ ಅವ್ಯವಹಾರ ನಡೆಸಿರುವ ಆರೋಪ ಕೇಳಿ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next