Advertisement

ED; ದಿಲ್ಲಿ ಲಿಕ್ಕರ್‌ ಕೇಸ್‌ ಡೀಲ್‌ಗೆ ಕೆಸಿಆರ್‌ ಪುತ್ರಿ ಕವಿತಾ ಸಂಚು

01:00 AM Mar 19, 2024 | Team Udayavani |

ಹೊಸದಿಲ್ಲಿ: ಸದ್ಯ ರದ್ದಾಗಿರುವ ದಿಲ್ಲಿ ಅಬಕಾರಿ ನೀತಿ ಹಗರಣದಲ್ಲಿ ತೆಲಂ ಗಾಣದ ಮಾಜಿ ಸಿಎಂ ಕೆ.ಚಂದ್ರಶೇಖರ ರಾವ್‌ ಪುತ್ರಿ ಕೆ.ಕವಿತಾ ಅವರೇ ಸಂಚು ರೂಪಿಸಿದ್ದಾರೆ. ಜತೆಗೆ ಆಪ್‌ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌, ಮನೀಶ್‌ ಸಿಸೋಡಿಯಾಗೆ 100 ಕೋಟಿ ರೂ. ನೀಡು ವಲ್ಲಿ ಪ್ರಮುಖ ಪಾತ್ರ ವಹಿಸಿ ದ್ದಾರೆ ಎಂದು ಜಾರಿ ನಿರ್ದೇ ಶನಾಲ ಯ (ಇ.ಡಿ.) ಸೋಮವಾರ ಹೇಳಿದೆ.

Advertisement

ಕವಿತಾ ಬಂಧನದ ಬಳಿಕ ಮೊದಲ ಬಾರಿ ಹೇಳಿಕೆ ನೀಡಿರುವ ಇ.ಡಿ., ಸಿಎಂ ಕೇಜ್ರಿವಾಲ್‌ ಹಾಗೂ ಮನೀಶ್‌ ಅವ ರನ್ನು ಕವಿತಾ ಸಂಚಿನಲ್ಲಿ ಭಾಗಿ ಮಾಡಿ ದ್ದರು. ಈ ಮೂಲಕ ತಮಗೆ ಬೇಕಾ ದವರಿಗೆ ಮದ್ಯ ಮಾರಾಟದ ಪರ ವಾನಿಗೆ ಕೊಡಿಸಿದ್ದಲ್ಲದೆ ಇದಕ್ಕೆ ಪ್ರತಿ ಯಾಗಿ ದಿಲ್ಲಿ ಸರಕಾರಕ್ಕೆ ನೀಡಲಾದ 100 ಕೋಟಿ ರೂ. ಲಂಚದಲ್ಲಿ ನೇರ ವಾಗಿ ಪಾತ್ರ ವಹಿಸಿದ್ದರು ಎಂದಿದೆ. ಈ ಮೊದಲು ಮಾತನಾಡಿದ್ದ ಕವಿತಾ, ನಾನು ತಪ್ಪು ಮಾಡಿಲ್ಲ ಎಂದಿದ್ದರು.

ಬಂಧನ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಕವಿತಾ
ದಿಲ್ಲಿ ಅಬಕಾರಿ ನೀತಿ ಪ್ರಕರಣ ದಲ್ಲಿ ತಮ್ಮ ಬಂಧನವನ್ನು ಪ್ರಶ್ನಿಸಿ ಕವಿತಾ ಸುಪ್ರೀಂ ಮೆಟ್ಟಿ ರೇಲಿದ್ದಾರೆ. ಸೋದರ ಕೆ.ಟಿ. ರಾಮ ರಾವ್‌ರನ್ನು ಭೇಟಿ ಮಾಡಿದ ಬಳಿಕ ಈ ಬೆಳವಣಿಗೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕವಿತಾರನ್ನು ಶುಕ್ರವಾರ ಬಂಧಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next