Advertisement

MUDA CASE: ರಾಜಕೀಯ ಸುದ್ದಿಗಾಗಿ ಇ.ಡಿ. ಯತ್ನ : ಹರಿಪ್ರಸಾದ್‌ ಆರೋಪ

11:49 PM Oct 20, 2024 | Team Udayavani |

ಚಿತ್ರದುರ್ಗ: ಮುಡಾ ಕಚೇರಿ ಮೇಲೆ ದಾಳಿ ನಡೆಸಿರುವ ಇ.ಡಿ. (ಜಾರಿ ನಿರ್ದೇಶನಾಲಯ) ಅಧಿ ಕಾರಿಗಳು ರಾಜಕೀಯ ಸುದ್ದಿ ಮಾಡುವ ಉದ್ದೇಶದಿಂದ ಅಲ್ಲಿದ್ದ ಪತ್ರಿಕೆಗಳನ್ನು ಹೊತ್ತುಕೊಂಡು ಹೋಗಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ದೂರಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಮುಡಾ ಪ್ರಕರಣದ ಕಡತ 2 ಬ್ಯಾಗ್‌ನಷ್ಟು ಇರುವುದಿಲ್ಲ. ರಾಜಕೀಯ ಲಾಭಕ್ಕಾಗಿ 2 ಬ್ಯಾಗ್‌ ಪ್ರದರ್ಶನ ಮಾಡಿದ್ದಾರೆ ಎಂದರು. ಸಿಎಂ ಸಿದ್ದರಾಮಯ್ಯ ವಿಚಾರದಲ್ಲಿ ಸಾಫ್ಟ್‌ ಆಗಿದ್ದೀರಿ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯವರು ಐ.ಟಿ., ಇ.ಡಿ., ಸಿಬಿಐ ಇಟ್ಟುಕೊಂಡು ರಾಜಕೀಯ ಮಾಡಿದಾಗ ಮಾತನಾಡಬೇಕಾಗುತ್ತದೆ. ಅದರ ಅರ್ಥ ಸಾಫ್ಟ್‌ ಅಂತ ಅರ್ಥ ಅಲ್ಲ. ನಾನು ಯಾರ ಬಗ್ಗೆಯೂ ಸಾಫ್ಟ್‌ ಅಥವಾ ಹಾರ್ಡ್‌ ಇಲ್ಲ. ಇ.ಡಿ. ಒಂದು ಸಂಘಟನೆಯ ನಿಯಂತ್ರಣದಲ್ಲಿದ್ದು 25 ವರ್ಷದ ಮುಡಾ ಕೇಸ್‌ ಮೂಲಕ ಬಿಜೆಪಿ ರಾಜಕೀಯ ದ್ವೇಷ ಮಾಡಲು ಹೊರಟಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next