Advertisement

Ayodhya: ರಾಮಮಂದಿರದ ಸುತ್ತ ಹದ್ದಿನ ಕಣ್ಣು- ಮನೆಯ ಮಾಳಿಗೆಗಳೇ ಗಸ್ತಿನ ಗುರಿ!

12:49 AM Dec 21, 2023 | Team Udayavani |

ಅಯೋಧ್ಯೆ: 35 ಅಡಿ ಎತ್ತರದ ವಾಚ್‌ ಟವರ್‌ಗಳ ಮೇಲೆ ನಿಂತು ಎದೆ ನೇರಕ್ಕೆ ಬಂದೂಕು ಏರಿಸಿ, ಆಕಾಶದಲ್ಲಿನ ಹದ್ದುಗಳಂತೆ ಸರಹದ್ದು ಕಾಯುತ್ತಿದ್ದಾರೆ ಉತ್ತರ ಪ್ರದೇಶ ಪೊಲೀಸರು. ಈ ಹದ್ದಿನ ನೋಟ ನೆಟ್ಟಿರುವುದು ಬರೀ ರಾಮಮಂದಿರದತ್ತ ಮಾತ್ರವಲ್ಲ, ಅದರ ಸುತ್ತಲಿನ ಪ್ರದೇಶವಾದ ರಾಮಕೋಟದ ಮಾಳಿಗೆಗಳ ಮೇಲೂ!.

Advertisement

ಹೌದು, ಮಂದಿರದ ನೆರೆಯ ಪ್ರದೇಶ ರಾಮಕೋಟದ ಮನೆಗಳ ಮಾಳಿಗೆಗಳಿಂದ ನೇರವಾಗಿಯೇ ಮಂದಿರದ ದರ್ಶನ ಪಡೆಯಬಹುದು. ವಿವಾದಿತ ಕಟ್ಟಡದ ಧ್ವಂಸದಿಂದ ಹಿಡಿದು ಮಂದಿರ ನಿರ್ಮಾಣದ ಶಿಲಾನ್ಯಾಸದವರಗೆ ಹಲವಾರು ಐತಿಹಾಸಿಕ ಘಟನೆಗಳನ್ನು  ಈ ಮಾಳಿಗೆಗಳು ಕಣ್ತುಂಬಿಕೊಂಡಿವೆ. ಈ ಹಿನ್ನೆಲೆಯಲ್ಲಿ ಈ ಮಾಳಿಗೆಗಳ ಪರಿಶೀಲನೆಯೂ ಭದ್ರತಾಪಡೆಯ ಆದ್ಯತೆಯಾಗಿದೆ. ಸದಾಕಾಲ ಸಿಬಂದಿ ವಾಚ್‌ ಟವರ್‌ಗಳ ಮೇಲೆ ನಿಂತು ಮನೆಗೆ ಹೋಗುವವರು, ಬರುವವರು, ಮಾಳಿಗೆ ಏರುವವರನ್ನು ಗಮನಿಸುತ್ತಿದ್ದಾರೆ. ಜತೆಗೆ ಅಲ್ಲಿನ ಎಲ್ಲ ನಿವಾಸಗಳಿಗ‌ೂ ಅನುಮತಿ ಇಲ್ಲದೇ ಯಾವುದೇ ಅಪರಿಚಿತರು ಮಾಳಿಗೆ ಏರದಂತೆ ಖಚಿತಪಡಿಸಿಕೊಳ್ಳಲು ಸೂಚನೆಯನ್ನೂ ನೀಡಲಾಗಿದೆ. ಒಟ್ಟಾರೆ ಮಂದಿರಕ್ಕೆ ಮಾತ್ರವಲ್ಲದೇ, ಮಂದಿರದ ಸುತ್ತ ಮುತ್ತಲಿನ ಪ್ರದೇಶಗಳಲ್ಲೂ ಸುರಕ್ಷೆ ಖಾತರಿಪಡಿಸಿಕೊಳ್ಳಲಾಗುತ್ತಿದೆ.

 ಅಮೆರಿಕದ ಮಂದಿರಗಳಲ್ಲಿ ವಾರಪೂರ್ತಿ ಸಂಭ್ರಮ

ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ಸಮಾರಂಭದ ಹಿನ್ನೆಲೆಯಲ್ಲಿ ಉತ್ತರ ಅಮೆರಿಕದ ದೇವಾಲಯಗಳೂ ಈ ಸಂಭ್ರಮ ಆಚರಿಸಲು ಸಜ್ಜುಗೊಂಡಿವೆ. ಇದರ ಭಾಗವಾಗಿ ಜ.15ರಿಂದ ಜ.20ರ ವರೆಗೆ ವಾರ ಪೂರ್ತಿ ಧಾರ್ಮಿಕ ಸಮಾರಂಭಗಳನ್ನು ಆಯೋಜಿಸಿರುವುದಾಗಿ ಅಲ್ಲಿನ ಹಿಂದೂ ದೇಗುಲಗಳ ಮಂಡಳಿ ತಿಳಿಸಿದೆ.

ಡಿ.30ಕ್ಕೆ ಅಯೋಧ್ಯೆಗೆ ಏರ್‌ ಇಂಡಿಯಾ

Advertisement

ದಿಲ್ಲಿಯಿಂದ ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ವಿಮಾನಯಾನ ಸಂಸ್ಥೆ ಏರ್‌ ಇಂಡಿಯಾ ತನ್ನ ಮೊದಲ ವಿಮಾನ ಹಾರಾಟವನ್ನು ಡಿ.30ರಂದು ಆರಂಭಿಸುವುದಾಗಿ ಹೇಳಿದೆ. ಅಲ್ಲದೇ ಜ.16ರ ಅನಂತರ ದಿನನಿತ್ಯ ಸೇವೆ ಆರಂಭಿಸಲಿದೆ.

 

 

Advertisement

Udayavani is now on Telegram. Click here to join our channel and stay updated with the latest news.

Next