Advertisement

ಬೆಳ್ತಂಗಡಿ: 37,718 ಪಡಿತರ  ಚೀಟಿಗಳ ಇ-ಕೆವೈಸಿ ಪೂರ್ಣ

07:59 PM Aug 02, 2021 | Team Udayavani |

ಬೆಳ್ತಂಗಡಿ: ನ್ಯಾಯಬೆಲೆ ಅಂಗಡಿ ಗಳಲ್ಲಿ ಈಗಾಗಲೆ ಇ- ಕೆವೈಸಿಯಾಗಿರುವ ಪಡಿ ತರ ಚೀಟಿ ಫಲಾನುಭವಿಗಳನ್ನು ಹೊರತು ಪಡಿಸಿ, ಉಳಿದಿರುವ ಎಲ್ಲ ಫಲಾನುಭವಿಗಳ ಇ-ಕೆವೈಸಿಯನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ಆ.1 ನೇ ತಾರೀಕಿನಿಂದ 10 ನೇ ತಾರೀಕಿನರವರೆಗೆ ನಡೆಸುವ ಪ್ರಕ್ರಿಯೆ ಬೆಳ್ತಂಗಡಿ ತಾಲೂಕಿನಲ್ಲಿ ಬಿರುಸುಗೊಂಡಿದೆ.

Advertisement

ಇ-ಕೆವೈಸಿ ಮಾಡಿಸುವ ಉದ್ದೇಶ ಪಡಿತರ ಚೀಟಿದಾರರು ತಮ್ಮ ಇರುವಿಕೆಯ ಕುರಿತು ದೃಢೀಕರಣ ಮಾಡುವ ಪ್ರಕ್ರಿಯೆಯಾಗಿದೆ. ಎ.ಪಿ.ಎಲ್‌., ಬಿ.ಪಿ.ಎಲ್‌., ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಕುಟುಂಬಸ್ಥರು ನ್ಯಾಯಬೆಲೆ ಅಂಗಡಿಯಲ್ಲಿ ಇ-ಕೆವೈಸಿ ಮಾಡಿಸಬೇಕಿದೆ. 2021ರ ಆಗಸ್ಟ್‌ ತಿಂಗಳ ವರೆಗೆ ಇ-ಕೆವೈಸಿ ಅವಕಾಶ ನೀಡ ಲಾಗಿದ್ದು, ಆ ಬಳಿಕ ಇ-ಕೆವೈಸಿ ಮಾಡದ ಪಡಿತರ ಚೀಟಿದಾರರ ಪಡಿತರವನ್ನು ತಡೆಹಿಡಿ ಯಲಾಗುತ್ತದೆ.

ಗ್ರಾಮೀಣ ಭಾಗದಲ್ಲಿ ಸವಾಲು:

ಜಾತಿ ಪ್ರಮಾಣ ಪತ್ರ, ಅನಿಲ ಸಂಪರ್ಕದ ಪುಸ್ತಕ, ಪಡಿತರ ಚೀಟಿ, ಆಧಾರ್‌ ಕಾರ್ಡ್‌ ಹಾಗೂ ಆಧಾರ್‌ ಸಂಖ್ಯೆಗೆ ನೋಂದಾಯಿಸಿದ ಮೊಬೈಲ್‌ ಸಂಖ್ಯೆಯನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು. ಕೊರೊನಾದ ಮಧ್ಯೆಯೂ ಸಾಮಾಜಿಕ ಅಂತರ ಪಾಲಿ ಸುವುದು ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ನೆಟ್‌ವರ್ಕ್‌ ಸಮಸ್ಯೆ ಇ-ಕೆವೈಸಿಗೆ ತೊಡ ಕಾಗಿರುವ ಮಧ್ಯೆಯೂ ವಯಸ್ಸಾದ, ಕೊರೊನಾ ಬಾಧಿತರನ್ನು ಕರೆತಂದು ಕೆವೈಸಿ ನೀಡುವುದು ಸವಾಲಾಗಿದೆ.

ಒಟ್ಟು 62,844 ಪಡಿತರ ಚೀಟಿ:

Advertisement

ಬೆಳ್ತಂಗಡಿ ತಾ| ನಲ್ಲಿ ಒಟ್ಟು 62,844 ಪಡಿತರ ಚೀಟಿಗಳಲ್ಲಿ 37,718 ಪಡಿತರ ಚೀಟಿಗಳ ಇ-ಕೆವೈಸಿ ಪೂರ್ಣಗೊಂಡಿದೆ. ಒಟ್ಟು 2,49,068 ಪಡಿತರ ಚೀಟಿ ಫಲಾನು ಭವಿಗಳು ಇದ್ದು, 1,45,189 ಮಂದಿಯ ಇ-ಕೆವೈಸಿ ಪೂರ್ಣಗೊಂಡಿದೆ. ತಾ|ನ ಎಲ್ಲ 68 ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಕಾರ್ಯ ನಡೆಸ ಲಾಗುತ್ತಿದ್ದು, ಇ-ಕೆವೈಸಿ ಬಾಕಿ ಇರುವ ಫಲಾನುಭವಿಗಳು ಆ.10ರ ಒಳಗೆ ತಮ್ಮ ಬಯೋ ದೃಢೀಕರಣವನ್ನು ಕಡ್ಡಾಯ ವಾಗಿ ನೀಡುವಂತೆ ಆಹಾರ ಇಲಾಖೆ ಸೂಚಿಸಿದೆ. ಈ ಕುರಿತು ಸಂದೇಹಗಳು ಇದ್ದಲ್ಲಿ 08256-232383 ದೂರವಾಣಿ ಸಂಪರ್ಕಿಸಬಹುದಾಗಿದೆ.

ಪಡಿತರ ಚೀಟಿದಾರರು ತಮ್ಮ ಇರುವಿಕೆಯನ್ನು ಖಾತ್ರಿ ಪಡಿಸಲು ಬಯೋ- ದೃಢೀಕರಣ ನೀಡುವ ಇ-ಕೆವೈಸಿ ಮಾಡಿಸಬೇಕು. ಆಗಸ್ಟ್‌ 10ರ ವರೆಗೆ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ಬಾಕಿ ಇರುವವರು ಕಡ್ಡಾಯವಾಗಿ ಮಾಡಬೇಕು. ಇ-ಕೆವೈಸಿ ಮಾಡಿಸದಿದ್ದಲ್ಲಿ ಪಡಿತರ ಹಂಚಿಕೆ ತಡೆಹಿಡಿಯಲಾಗುತ್ತದೆ. -ವಿಶ್ವ ಕೆ., ಆಹಾರ ನಿರೀಕ್ಷಕರು, ಬೆಳ್ತಂಗಡಿ 

 

-ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next