Advertisement

ಧುತ್ತರಗಾಂವ: 30 ಮರಿಗಳ ಹೊತ್ತ ಚೇಳು ಪತ್ತೆ

11:04 AM Oct 12, 2017 | |

ಆಳಂದ: ತಾಲೂಕಿನ ಧುತ್ತರಗಾಂವ ಗ್ರಾಮದ ವೀರೇಶ್ವರ ಗುರುಕುಲಾಶ್ರಮದಲ್ಲಿ ಬುಧವಾರ 30 ಮರಿಗಳನ್ನು ತನ್ನ ಬೆನ್ನು ಮೇಲೆ ಹೊತ್ತಿಕೊಂಡಿದ್ದ ದೊಡ್ಡದಾದ ವಿಷಕಾರಕ ಚೇಳೊಂದು ಪತ್ತೆಯಾಗಿದೆ. 

Advertisement

ಆಶ್ರಮದಲ್ಲಿ ಅ. 13ರಿಂದ ಎರಡು ದಿನಗಳ ಕಾಲ ಲಿಂ|ಚನ್ನಬಸವ ಸ್ವಾಮಿಗಳ ಪುಣ್ಯಸ್ಮರಣೋತ್ಸವ ನಡೆಯಲಿರುವ ಪ್ರಯುಕ್ತ ಭಕ್ತರು ಸ್ವತ್ಛತಾ ಕಾರ್ಯದಲ್ಲಿ ತೊಡಗಿದ್ದರು. ಬಾಗಿಲಿನ ಹಿಂಬದಿಯಲ್ಲಿ ದೊಡ್ಡದಾದ ಚೇಳು ಕಂಡು ಭಯಗೊಂಡ ಸೇವಕನೊಬ್ಬ ಆಶ್ರಮದ ಶ್ರೀ ವಿಶ್ವನಾಥ ಕೋರಣೇಶ್ವರ ಸ್ವಾಮಿಗಳ ಗಮನಕ್ಕೆ ತಂದ. ಶ್ರೀಗಳು ಎಣಿಕೆ ಮಾಡಿದಾಗ 30 ಮರಿಗಳಿದ್ದವು. ಅದು ತನ್ನ ಮರಿಗಳನ್ನು ಬೆನ್ನಿನ ಮೇಲೆ ಹೊತ್ತುಕೊಂಡು ದೊಡ್ಡ ಚೇಳು ಸಂಚರಿಸಿತು. ಅದನ್ನು ಸೆರೆ ಹಿಡಿದು ನಂತರ ಇನ್ನೊಂದು ಸ್ಥಳಕ್ಕೆ ಜೀವಂತವಾಗಿ ಬಿಡಲಾಯಿತು. ಆಶ್ರಮದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡದಾದ ವಿಷಕಾರ ಚೇಳು ಪತ್ತೆಯಾಗಿದೆ. ಆದರೂ ಇಂಥವುಗಳಿಂದ ಜನರು ದೂರವಿರುವುದು ಒಳಿತು ಎಂದು ಶ್ರೀಗಳು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next