Advertisement
ನಕಲಿ ಕಾರ್ಡ್ ವಿತರಣೆ ಮಾಡುತ್ತಿರುವ ಬಗ್ಗೆ ಪ್ರಶ್ನಿಸಿದ ಗ್ರಾಮದ ವ್ಯಕ್ತಿಯೊಬ್ಬರಿಗೆ ನಕಲಿ ಏಜೆನ್ಸಿಯ ಏಜೆಂಟರು ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಗಮನಕ್ಕೂ ತರಲಾಗಿದೆ. ವಿಷಯ ಬಹಿರಂಗಗೊಳ್ಳುತ್ತಿದ್ದಂತೆ ನಕಲಿ ಏಜೆನ್ಸಿಯವರು ಗ್ರಾಮದಿಂದ ಕಾಲ್ಕಿತ್ತಿದ್ದಾರೆ.
Related Articles
Advertisement
ಡಿಹೆಚ್ಒಗೆ ದೂರು: ಇದಕ್ಕೆ ಬೆದರದ ಯೋಗೇಶ್, ನೋಡಿ, ನೀವು ಈ ರೀತಿ ಮಾಡುತ್ತಿರುವುದು ಸರಿಯಲ್ಲ. ನೀವೆಲ್ಲಾ ಸೇರಿಕೊಂಡು ಜನÃನ್ನು ವಂಚಿಸುತ್ತಿದ್ದೀರಿ. ನಾನು ಈ ಬಗ್ಗೆ ದೂರು ಕೊಡುತ್ತೇನೆ ಎಂದಾಗ ನಕಲಿ ಏಜೆನ್ಸಿಯವರು ಇವರೊಂದಿಗೆ ಮಾತಿನ ಚಕಮಕಿ ನಡೆಸಿದರು. ಕೊನೆಗೂ ಯೋಗೇಶ್ ಈ ವಿಷಯವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಪಿ.ಮಂಚೇಗೌಡರ ಗಮನಕ್ಕೆ ತಂದರು. ಆಗ ಅವರು ಕೂಡಲೇ ಪೊಲೀಸ್ಗೆ ದೂರು ಕೊಡಿ. ಮುಂದಿನದನ್ನು ನಾನು ನೋಡಿಕೊಳ್ಳುತ್ತೇನೆ. ನಾವು ಪ್ರತಿ ಕಾರ್ಡ್ಗೆ 200 ರೂ. ಪಡೆಯುವಂತೆ ಯಾರಿಗೂ ಅನುಮತಿ ನೀಡಿಲ್ಲ ಎಂದು ಹೇಳಿದರು.
ಕೊನೆಗೆ ಏಜೆಂಟರು ಅಲ್ಲಿಂದ ಹೋದವರು ಮತ್ತಷ್ಟು ಜನರನ್ನು ಕರೆತಂದು ಯೋಗೇಶ್ ನಿವಾಸದ ಎದುರು ಗಲಾಟೆ ಮಾಡಲು ಮುಂದಾದರು. ದೂರವಾಣಿ ಮೂಲಕ ಕರೆ ಮಾಡಿದ ವ್ಯಕ್ತಿಯೊಬ್ಬರು ನಾನು ಚೀರನಹಳ್ಳಿ ಶಂಕರ್ ಬಾವಮೈದ. ಇದನ್ನೆಲ್ಲಾ ಕೇಳ್ಳೋಕೆ ನೀನ್ಯಾರು ಎಂದೆಲ್ಲಾ ಬೆದರಿಕೆ ಹಾಕಿದ್ದಾರೆ. ಕೊನೆಗೆ ಎಲ್ಲರೂ ಅಲ್ಲಿಂದ ತೆರಳಿದ್ದಾರೆ.