Advertisement

Duleep Trophy: ಫೈನಲ್‌ ಕಾವೇರಪ್ಪ ದಾಳಿಗೆ ಕುಸಿದ ಪಶ್ಚಿಮ

11:27 PM Jul 13, 2023 | Team Udayavani |

ಬೆಂಗಳೂರು: ದುಲೀಪ್‌ ಟ್ರೋಫಿ ಕ್ರಿಕೆಟ್‌ ಕೂಟದ ಫೈನಲ್‌ ತೀವ್ರ ಪೈಪೋಟಿಯಿಂದ ಸಾಗುತ್ತಿದೆ. ಪಂದ್ಯದ ದ್ವಿತೀಯ ದಿನ ದಕ್ಷಿಣ ವಲಯದ ವೇಗಿಗಳ ದಾಳಿಗೆ ಹಠಾತ್‌ ಕುಸಿದ ಪಶ್ಚಿಮ ವಲಯ ದಿನದಾಟದ ಅಂತ್ಯಕ್ಕೆ 129 ರನ್ನಿಗೆ 7 ವಿಕೆಟ್‌ ಕಳೆದುಕೊಂಡು ಒದ್ದಾಡುತ್ತಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಲು ಪಶ್ಚಿಮ ಇನ್ನೂ 84 ರನ್‌ ಗಳಿಸಬೇಕಾಗಿದೆ. ಈ ಮೊದಲು ದಕ್ಷಿಣ ವಲಯ ಮೊದಲ ಇನ್ನಿಂಗ್ಸ್‌ನಲ್ಲಿ 213 ರನ್‌ ಗಳಿಸಿ ಆಲೌಟಾಗಿತ್ತು.

Advertisement

ಉತ್ತಮ ಆರಂಭ
ಎಚ್ಚರಿಕೆಯ ಆಟವಾಡಿದ ಪಶ್ಚಿ ಮದ ಅಗ್ರ ಕ್ರಮಾಂಕದ ಆಟಗಾ ರರು ಉತ್ತಮ ಮೊತ್ತ ಪೇರಿಸಲು ಪ್ರಯತ್ನಿಸಿದರು. ಪೃಥಿ ಶಾ ಜವಾ ಬ್ದಾರಿಯಿಂದ ಆಡಿ ತಂಡವನ್ನು ರಕ್ಷಿಸುವ ಭಾರ ಹೊತ್ತರು. ಅವರು ಪ್ರಿಯಾಂಕ್‌ ಪಾಂಚಾಲ್‌ ಮತ್ತು ಹಾರ್ವಿಕ್‌ ದೇಸಾಯಿ ಜತೆಗೆ ಉತ್ತಮ ಜತೆ ಯಾಟದ ಆಟ ಆಡಲು ಶ್ರಮ ವಹಿಸಿದರು. ಹಾರ್ವಿಕ್‌ ದೇಸಾಯಿ ತಂಡದ ಮೊತ್ತ 97 ತಲುಪಿದಾಗ ಔಟಾದರು. ಆಬಳಿಕ ಪಶ್ಚಿಮ ಕುಸಿಯುತ್ತಲೇ ಹೋಯಿತು. ಮೊತ್ತ 124 ತಲುಪಿದಾಗ 7 ವಿಕೆಟ್‌ ಕಳೆದುಕೊಂಡಿತ್ತು. ಅಂದರೆ 17 ರನ್‌ ಅಂತರದಲ್ಲಿ ತಂಡದ 5 ವಿಕೆಟ್‌ ಉರುಳಿತ್ತು. ಏಕಾಂಗಿಯಾಗಿ ಹೋರಾಡಿದ ಪೃಥ್ವಿ ಶಾ 65 ರನ್‌ ಹೊಡೆದರು. ವಿದ್ವತ್‌ ಕಾವೇರಪ್ಪ ಮಾರಕ ದಾಳಿ ಸಂಘಟಿಸಿ ನಾಲ್ಕು ವಿಕೆಟ್‌ ಪಡೆದಿದ್ದರು.

ಸಂಕ್ಷಿಪ್ತ ಸ್ಕೋರು
ದಕ್ಷಿಣ ವಲಯ 213; ಪಶ್ಚಿಮ ವಲಯ 7 ವಿಕೆಟಿಗೆ 129 (ಪೃಥ್ವಿ ಶಾ 65, ಹಾರ್ವಿಕ್‌ ದೇಸಾಯಿ 21, ಕಾವೇರಪ್ಪ 44ಕ್ಕೆ 4, ವಿಜಯಕುಮಾರ್‌ ವೈಶಾಖ್‌ 29ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next