Advertisement

ನಾನು ಬದುಕಿರಲು ಜಾಫ‌ರ್‌  ಶರೀಫ್ ಕಾರಣ: ದ್ವಾರಕೀಶ್‌

06:20 AM Nov 26, 2018 | Team Udayavani |

ಬೆಂಗಳೂರು:“ನನಗೆ ಗಾಡ್‌ಫಾದರ್‌ ಅಂತಹ ಇದ್ರೆ ಅದು ಜಾಫ‌ರ್‌ ಶರೀಫ್’ ಹೀಗೆ ಹೇಳಿ ಗದ್ಗದಿತರಾದರು ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌. 

Advertisement

ಅವರು ಹೀಗೆ ಹೇಳಲು ಕಾರಣ ಜಾಫ‌ರ್‌ ಶರೀಫ್ ಮಾಡಿದ ಸಹಾಯ. ದ್ವಾರಕೀಶ್‌ ಅವರ ಹೃದಯ ಶಸ್ತ್ರಚಿಕಿತ್ಸೆಯನ್ನು ಮಾಡಿಸಿದವರು ಜಾಫ‌ರ್‌ ಶರೀಫ್. ಈ ಬಗ್ಗೆ ಮಾತನಾಡಿದ ದ್ವಾರಕೀಶ್‌, “ನಾನು ಇವತ್ತು ಬದುಕಿರಲೂ ಕಾರಣ ಜಾಫ‌ರ್‌ ಶರೀಫ್. 

ನನ್ನ ಹಾರ್ಟ್‌ ಆಪರೇಷನ್‌ ಮಾಡಿಸಿದ್ದು ಅವರೇ. ನನಗೆ ಗಾಡ್‌ಫಾದರ್‌ ಅಂತಹ ಇದ್ರೆ ಅದು ಜಾಫ‌ರ್‌ ಶರೀಫ್. ಅವರಿಲ್ಲದೇ ನಾನಿಲ್ಲ. ಅವರೇ ನನಗೆಲ್ಲ. ನನ್ನ ಹೆಂಡತಿ ಚಿತ್ರದುರ್ಗದವಳು. ಜಾಫ‌ರ್‌ ಶರೀಪ್‌ ಕೂಡಾ ಚಿತ್ರದುರ್ಗ. ಅಂಬುಜಾ ಹಾಗೂ ಜಾಫ‌ರ್‌ “ಹೋಗೋ ಬಾರೋ’ ಎಂದು ಮಾತನಾಡಿಸುತ್ತಿದ್ದರು. ನಿನ್ನೆ ಅವಳನ್ನು ಕರೆದುಕೊಂಡು ಹೋಗಿ ಅಂತಿಮ ದರ್ಶನ ಮಾಡಿಕೊಂಡು ಬಂದೆ. ರೈಲ್ವೆ ಸಚಿವರಾಗಿದ್ದಾಗ ಜಾಫ‌ರ್‌ ಶರೀಫ್, ಸಾಕಷ್ಟು ಕೆಲಸವನ್ನು ಮಾಡಿದ್ದಾರೆ. ಕನ್ನಡಿಗರಿಗೆ ಕೆಲಸ ಕೊಟ್ಟಿದ್ದಾರೆ. ಬಹಳ ಜನಕ್ಕೆ ಸಹಾಯ ಮಾಡಿದ್ದಾರೆ ಕೂಡಾ. ಇತ್ತೀಚೆಗಷ್ಟೇ ಅವರಲ್ಲಿ ಫೋನ್‌ನಲ್ಲಿ ಮಾತನಾಡಿದ್ದೆ. ಇವತ್ತು ಒಬ್ಬ ದೊಡ್ಡ ನಾಯಕನನ್ನು ಕಳೆದುಕೊಂಡಿದ್ದೇವೆ’ ಎಂದು ದ್ವಾರಕೀಶ್‌ ಹನಿಗಣ್ಣಾದರು.

Advertisement

Udayavani is now on Telegram. Click here to join our channel and stay updated with the latest news.

Next