Advertisement

SC: ಪಾವತಿ ಬಾಕಿ: 1ಕೋಟಿ ಠೇವಣಿ ಇಡಲು “ಕೈ”ಗೆ ಸುಪ್ರೀಂ ಸೂಚನೆ

12:57 AM Jan 20, 2024 | Team Udayavani |

ಹೊಸದಿಲ್ಲಿ: 1981ರಿಂದ 1989ರ ಅವಧಿಯಲ್ಲಿ ಯುಪಿಎಸ್‌ಆರ್‌ಟಿಸಿಯಿಂದ ಬಸ್‌ಗಳು ಮತ್ತು ಟ್ಯಾಕ್ಸಿಗಳನ್ನು ಬಾಡಿಗೆಗೆ ಪಡೆದು ಇದುವರೆಗೂ ಬಾಕಿ ಪಾವತಿಸದ ಹಿನ್ನೆಲೆಯಲ್ಲಿ ಬಾಕಿ ಪಾವತಿಯ ಭಾಗವಾಗಿ ಮುಂದಿನ ನಾಲ್ಕು ವಾರಗಳಲ್ಲಿ 1 ಕೋಟಿ ರೂ.ಗಳನ್ನು ಠೇವಣಿ ಇಡುವಂತೆ ಉತ್ತರ ಪ್ರದೇಶ ಕಾಂಗ್ರೆಸ್‌ಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ಸೂಚಿಸಿದೆ.

Advertisement

ಉತ್ತರ ಪ್ರದೇಶದಲ್ಲಿ 1981ರಿಂದ 1989ರ ಅವಧಿಯಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರಿದಲ್ಲಿತ್ತು. ಅಂದಿನ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ್‌ ಗಾಂಧಿ ಅವರ ಭೇಟಿ ಮತ್ತು ರಾಜಕೀಯ ರ್ಯಾಲಿಗಳಿಗಾಗಿ ಜನರನ್ನು ಕೊಂಡೊಯ್ಯಲು ಉತ್ತರ ಪ್ರದೇಶ ಕಾಂಗ್ರೆಸ್‌ ಯುಪಿಎಸ್‌ಆರ್‌ಟಿಸಿಯಿಂದ ಬಸ್‌ಗಳು ಮತ್ತು ಟ್ಯಾಕ್ಸಿಗಳನ್ನು ಬಾಡಿಗೆಗೆ ಪಡೆದಿತ್ತು. ಆದರೆ ಇದುವರೆಗೂ ಬಾಡಿಗೆ ಹಣವನ್ನು ಪಾವತಿಸಿಲ್ಲ. 2.68 ಕೋಟಿ ರೂ. ಬಾಕಿಯನ್ನು ಉತ್ತರ ಪ್ರದೇಶ ಕಾಂಗ್ರೆಸ್‌ ಉಳಿಸಿಕೊಂಡಿದೆ. ಈ ಸಂಬಂಧ ಯುಪಿಎಸ್‌ಆರ್‌ಟಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ 4 ವಾರದ‌ಲ್ಲಿ 1 ಕೋಟಿ ರೂ. ಠೇವಣಿ ಇಡುವಂತೆ ಉತ್ತರ ಪ್ರದೇಶ ಕಾಂಗ್ರೆಸ್‌ಗೆ ಆದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next