Advertisement

ಅಂಗವಿಕಲ ಯುವತಿಯನ್ನು ವರಿಸಿದ ದುಬೈ ಉದ್ಯೋಗಿ

07:34 PM Nov 24, 2020 | mahesh |

ಉಡುಪಿ: ಉಡುಪಿಯ ಕರಂಬಳ್ಳಿ ಗ್ರಾಮದ ನಿವಾಸಿಯಾಗಿರುವ ಸುನೀತಾ ಅವರಿಗೆ ಪೋಲಿಯೋ ಎಂಬ ಮಹಾಮಾರಿ ಅವರ ಎರಡೂ ಕಾಲುಗಳನ್ನು ಕಿತ್ತುಕೊಂಡಿತ್ತು. ತನಗೆ ಮದುವೆ ಬರೀ ಕನಸು ಅಂತ ಕಣ್ಣೀರಲ್ಲೇ ದಿನಕಳೆಯುತ್ತಿದ್ದ ಆಕೆಯನ್ನು ದುಬೈನ ತೈಲ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಮಂಗಳೂರು ಮೂಲದ ಸಂದೀಪ್‌ ಎಂಬ ಯುವಕ ವರಿಸುವ ಮೂಲಕ ಆಕೆಯ ಜೀವನ ಪಯಣಕ್ಕೆ ಸಾಥ್‌ ನೀಡಿದ್ದಾನೆ.

Advertisement

ಪಿಯುಸಿವರೆಗೆ ಓದಿಕೊಂಡು ತಂದೆ ತಾಯಿಯ ಆಶ್ರಯದಲ್ಲಿ ಬೆಳೆಯುತ್ತಿದ್ದ ಸುನೀತಾ, ತನ್ನ ಕಾಲಿನಂತೆ ಬದುಕು ಕೂಡಾ ನಿರಾಧಾರವಾಗುತ್ತೆ ಎಂದು ಖನ್ನತೆಗೆ ಜಾರಿದ್ದಳು. ಆದರೆ ಕಾಲು ಕಿತ್ತುಕೊಂಡು ಕಷ್ಟ ಕೊಟ್ಟ ದೇವರು ಮದುವೆಯ ವಿಚಾರದಲ್ಲಿ ಈಕೆಯ ಸೌಭಾಗ್ಯ ಕರುಣಿಸಿದ್ದಾನೆ. ದುಬೈನ ಆಯಿಲ್‌ ಕಂಪೆನಿಯಲ್ಲಿ ಉದ್ಯೋಗ ಮಾಡುತ್ತಿರುವ ಮಂಗಳೂರಿನ ನಿವಾಸಿ ಸಂದೀಪ್‌ ತಾನೇ ಮುಂದೆ ಬಂದು ಈಕೆಯ ಜೀವನ ಪಯಣಕ್ಕೆ ಆಧಾರವಾಗಲು ನಿರ್ಧರಿಸಿದ್ದಾರೆ.

ದೇವಸ್ಥಾನದಲ್ಲಿ ವಿವಾಹ
ಮನೆಯವರ ಒಪ್ಪಿಗೆಯಂತೆ ಸೋಮವಾರ ಕರಂಬಳ್ಳಿಯ ದೇವಸ್ಥಾನದಲ್ಲಿ ಇವರ ವಿವಾಹ ನೆರವೇರಿತು. ಇಂತಹ ಹುಡುಗಿಗೆ ಬಾಳು ನೀಡಬೇಕೆಂದು ಮೊದಲೇ ನಿರ್ಧರಿಸಿದ್ದ ಸಂದೀಪ್‌, ಸಂಬಂಧಿಕರ ಮೂಲಕ ಈ ಯುವತಿಯ ಬಗ್ಗೆ ವಿಚಾರಿಸಿ ತಾನೇ ಮುಂದೆ ಬಂದು ವಿವಾಹವಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next