Advertisement

ದುಬಾೖಯಿಂದ 12 ಮೃತದೇಹ ಸಾಗಣೆ ಶೀಘ್ರ

11:48 PM Jun 08, 2019 | Team Udayavani |

ದುಬಾೖ: ದುಬೈನಲ್ಲಿ ರಸ್ತೆ ಅಪಘಾತದಲ್ಲಿ ಅಸುನೀಗಿದ 12 ಭಾರತೀಯರ ಮೃತದೇಹಗಳನ್ನು ಭಾರತಕ್ಕೆ ತರುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಕಾನೂನು ಕ್ರಮಗಳನ್ನು ನಡೆಸಲಾಗುತ್ತಿದೆ. ಬೆರಳಚ್ಚು ಗುರುತು ಮತ್ತು ಇತರ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

Advertisement

11 ದೇಹಗಳಿಗೆ ನಿರಾಕ್ಷೇಪಣ ಪತ್ರ ನೀಡಲಾಗಿದೆ. ಇನ್ನೊಂದು ಪ್ರಮಾಣಪತ್ರ ಬಾಕಿ ಇದೆ ರಾಯಭಾರ ಕಚೇರಿ ಅಧಿಕಾರಿ ವಿಪುಲ್‌ ಹೇಳಿದ್ದಾರೆ. ಮೃತ ದೇಹಗಳನ್ನು ಸಾಗಿಸಲು ಏರ್‌ ಇಂಡಿಯಾ ನೆರವು ನೀಡುತ್ತಿದೆ. ರವಿವಾರದ ವೇಳೆಗೆ ಎಲ್ಲ ಮೃತದೇಹಗಳೂ ಭಾರತಕ್ಕೆ ಬರಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈದ್‌ ಹಬ್ಬದ ನಿಮಿತ್ತ ಓಮನ್‌ನಿಂದ ಇವರು ದುಬಾೖಗೆ ಆಗಮಿಸುತ್ತಿದ್ದರು. ಈ ವೇಳೆ ಕಾರ್‌ ಮತ್ತು ಬಸ್‌ ಅಪಘಾತ ಸಂಭವಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next