Advertisement

ಮನೆಗೇ ಬೆಂಕಿ ಇಟ್ಟು ಸತ್ತ ಕುಡುಕ;ಪತ್ನಿ ಮಕ್ಕಳಿಬ್ಬರು ಪಾರು

09:35 AM Sep 07, 2017 | Team Udayavani |

ಬಾಗಲಕೋಟೆ: ಬಾದಾಮಿ ತಾಲೂಕಿನ ನೆವಲಗಿ ಎಂಬಲ್ಲಿ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಪತ್ನಿ ಮತ್ತು ಮಕ್ಕಳಿಬ್ಬರಿಗೆ ಬೆಂಕಿ ಹಚ್ಚಿ ತಾನೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಶುಕ್ರವಾರ ನಸುಕಿನ ವೇಳೆ ನಡೆದಿದೆ. ಅದೃಷ್ಟವಷಾತ್‌ ಪತ್ನಿ ಮತ್ತು ಮಕ್ಕಳಿಬ್ಬರು ಪಾರಾಗಿದ್ದಾರೆ. 

Advertisement

ಮದ್ಯಪಾನ ಮಾಡಿದ್ದ ಬಸ್ಸಪ್ಪ ಮುಕಾಶಿ(42) ಎಂಬಾತ ಪತ್ನಿ ನಿರ್ಮಲಾ(35) ಮಕ್ಕಳಾದ ಸವಿತಾ(12)ಮತ್ತು ರಾಹುಲ್‌(9) ಮಲಗಿದ್ದ ವೇಳೆ ಬೆಂಕಿ ಹಚ್ಚಿ ಬಳಿಕ ತಾನೂ ಬೆಂಕಿ ಹಚ್ಚಿಕೊಂಡು ಸುಟ್ಟು ಕರಕಲಾಗಿದ್ದಾನೆ. 

ಬೆಂಕಿ ಹಚ್ಚಿದ ಕೂಡಲೇ ಬೊಬ್ಬೆ ಕೇಳಿಸಿಕೊಂಡು ನೆರೆ ಹೊರೆಯವರು ದೌಡಾಯಿಸಿ ನಿರ್ಮಲಾ ಮತ್ತು ಮಕ್ಕಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೂವರಿಗೆ ಬಾಗಲಕೋಟೆ  ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೂವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. 

ಬಾದಾಮಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next