Advertisement

ಪಾನಮತ್ತನಾಗಿದ್ದ ವ್ಯಕ್ತಿಯ ಹೊಟ್ಟೆಯಲ್ಲಿತ್ತು ವೋಡ್ಕಾ ಬಾಟಲ್‌ !

10:08 PM Mar 11, 2023 | Team Udayavani |

ಕಠ್ಮಂಡು : ಪಾನಮತ್ತನಾಗಿದ್ದ ವ್ಯಕ್ತಿಯೊಬ್ಬನ ದೇಹದಿಂದ ವೈದ್ಯರು ವೋಡ್ಕಾ ಬಾಟಲ್‌ ಹೊರತೆಗೆದಿದ್ದು, ಆತನ ಸ್ನೇಹಿತರೇ ಗುದದ್ವಾರದ ಮೂಲಕ ವ್ಯಕ್ತಿಯ ಹೊಟ್ಟೆಗೆ ಬಾಟಲ್‌ ತುರುಕಿರುವ ವಿಲಕ್ಷಣ ಘಟನೆ ನೇಪಾಳದಲ್ಲಿ ವರದಿಯಾಗಿದೆ.

Advertisement

ಪ್ರಕರಣ ಸಂಬಂಧಿಸಿದಂತೆ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ. ಉಳಿದವರಿಗಾಗಿ ಶೋಧ ನಡೆಸಲಾಗುತ್ತಿದೆ. ರೌತಾಹತ್‌ ಜಿಲ್ಲೆಯ ನರ್ಸಾದ್‌ ಮನ್ಸೂರಿ ಎಂಬಾತ ಹೊಟ್ಟೆನೋವಿನಿಂದ ಆಸ್ಪತ್ರೆ ದಾಖಲಾಗಿದ್ದ. ಆತನನ್ನು ಪರೀಕ್ಷಿಸಿದಾಗ ಹೊಟ್ಟೆಯಲ್ಲಿ ವೋಡ್ಕಾ ಬಾಟಲ್‌ ಪತ್ತೆಯಾಗಿದೆ.

ಬಳಿಕ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ, ಬಾಟಲ್‌ ಹೊರತೆಗೆದಿದ್ದಾರೆ. ನರ್ಸದ್‌ನ ಗುದದ್ವಾರದಿಂದ ಬಾಟಲ್‌ ಹೊಟ್ಟೆ ಸೇರಿ ಆತನ ಕರುಳು ತುಂಡರಿಸಿತ್ತು. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ನರ್ಸಾದ್‌ ಪ್ರಾಣಪಾಯದಿಂದ ಪಾರಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next