Advertisement

ಕುಡುಕನ ರೋಷಾವೇಶ; ಟ್ರಾಫಿಕ್‌ ಪೊಲೀಸರ ಮೇಲೆ ದಾಳಿ 

03:52 PM Oct 10, 2018 | |

ದಾವಣಗೆರೆ: ಇಲ್ಲಿನ ಸದಡಿ ರಸ್ತೆ ಬಳಿ  ಕುಡುಕನೊಬ್ಬ ಟ್ರಾಫಿಕ್‌ ಪೊಲೀಸರು ತಪಾಸಣೆ ನಡೆಸುತ್ತಿದ್ದ ವೇಳೆ ರೋಷಾವೇಶ ತೋರಿದ್ದು, ಪೊಲೀಸರ ಮೇಲೆ ಹಲ್ಲೆ ನಡೆಸಿ ಅಟ್ಟಹಾಸ ಮೆರೆದಿದ್ದಾನೆ. 

Advertisement

ಬುಧವಾರ ಮಧ್ಯಾಹ್ನ ಘಟನೆ ನಡೆದಿದ್ದು, ಬೈಕ್‌ ಅಡ್ಡಗಟ್ಟಿದಾಗ ಮಧ್ಯಾಹ್ನ ಯಾಕೆ ತಪಾಸಣೆ ಮಾಡುತ್ತೀರಿ ಎಂದು ಕಿರಿಕ್‌ ತೆಗೆದ ಕುಡುಕ ರುದ್ರೇಶ್‌ ಎಂಬಾತ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾನೆ. ಪಕ್ಕದಲ್ಲಿದ್ದ ಇಟ್ಟಿಗೆಯನ್ನೂ ಪೊಲೀಸರ ಮೇಲೆ ಎಸೆದಿದ್ದಾನೆ. ಕುಸ್ತಿ ಪಟುವಿನಂತೆ ಓರ್ವ ಪೊಲೀಸ್‌ ಸಿಬಂದಿಯನ್ನು ನೆಲಕ್ಕೆ ಕೆಡವಿದ್ದಾನೆ. 

 ಎಎಸ್‍ಐ ಅಂಜಿನಪ್ಪ ಮತ್ತು ಸಿಬಂದಿಗಳಾದ ಸಿದ್ದೇಶ್, ನಾರಾಯಣರಾಜ್ ಅರಸು ಅವರ ಮೇಲೆ ದಾಳಿ ನಡೆಸಿದ್ದಾನೆ. ನಾರಾಯಣ ರಾಜು ಅವರ ಹಣೆಗೆ ಬಲವಾದ ಗಾಯವಾಗಿದೆ. 

ದಾಳಿ ನಡೆಸಿದ ರುದ್ರೇಶ್‌ ವಕೀಲ ಎಂದು ಹೇಳಲಾಗಿದೆ. ಆತನನ್ನು ಬಂಧಿಸಿರುವ ದಾವಣಗೆರೆ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next