Advertisement

ಕುಡಿದ ಮತ್ತಿನಲ್ಲಿ ಟ್ರಕ್ ಚಾಲನೆ- ಅಪಘಾತ; ಮೂವರು ಬೈಕ್ ಸವಾರರು ಸಾವು, ಹಲವರು ಗಂಭೀರ

12:39 PM Jan 06, 2021 | Team Udayavani |

ಜೈಪುರ: ಕುಡಿದ ಮತ್ತಿನಲ್ಲಿ ಟ್ರಕ್  ಚಾಲಕನೊಬ್ಬ  ಬೈಕ್ ಗಳಿಗೆ ಗುದ್ದಿದ ಪರಿಣಾಮ ಮೂವರು ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ಘಟನೆ ಜೈಪುರ ದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

Advertisement

ಅಪಘಾತದ ದೃಶ‍್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಕುಡಿದ ಮತ್ತಿನಲ್ಲಿನಲ್ಲಿದ್ದ ಚಾಲಕ ಬಹಳ ವೇಗವಾಗಿ ಟ್ರಕ್ ಚಲಾಯಿಸುತ್ತಿದ್ದ ಎನ್ನಲಾಗಿದೆ.  ಜೈಪುರದ ಬ್ರಾಂಪುರಿ ಫ್ಲೈಓವರ್ ಬಳಿ ಬೈಕ್ ಗಳಿಗೆ ಗುದ್ದಿದ್ದು, ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರನ್ನು ರಾಜ್ ಕುಮಾರ್, ಲಾಲ್ ಚಂದ್ ಮತ್ತು ಮೊಹಮ್ಮದ್ ಸಲಾಂ ಎಂದು ಗುರುತಿಸಲಾಗಿದೆ. ಟ್ರಕ್ ಚಾಲಕ ಹರ್ಯಾಣ ಮೂಲದವನು ಎಂದು ತಿಳಿದುಬಂದಿದೆ.

ಇದನ್ನೂ ಓದಿ:  ದೂರದಿಂದಲೇ ಹುಟ್ಟು ಹಬ್ಬಕ್ಕೆ ಶುಭ ಹಾರೈಸಿ : ಅಭಿಮಾನಿಗಳಿಗೆ ಯಶ್ ಮನವಿ

ಮಂಗಳವಾರ (ಜ.5)  ರಾತ್ರಿ 7:30 ಸುಮಾರಿಗೆ ದುರ್ಘಟನೆ ಸಂಭವಿಸಿದ್ದು, ಮೃತಪಟ್ಟವರು ಮತ್ತು ಗಾಯಗೊಂಡವರೆಲ್ಲಾ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದರು ಎನ್ನಲಾಗಿದೆ.  ಈ ನಡುವೆ ಅಕ್ಕಿ ಚೀಲಗಳನ್ನು ಹೊತ್ತಿದ್ದ ಟ್ರಕ್ ವೇಗವಾಗಿ ಬಂದು ಬೈಕ್ ಸವಾರರ ಮೇಲೆ ಹರಿದಿದೆ.

Advertisement

ಅಪಘಾತ ಸಂಭವಿಸಿದ ಸ್ವಲ್ಪ ದೂರದಲ್ಲೇ ಬಸ್ ನಿಲ್ದಾಣವಿದ್ದು ನೂರಾರು ಪ್ರಯಾಣಿಕರು ಬಸ್ ಗಾಗಿ ಕಾದು ನಿಂತಿದ್ದರು. ಅಪಘಾತವಾದ ಕೂಡಲೇ ಟ್ರಕ್ ಮಗುಚಿ ಬಿದ್ದಿದ್ದರಿಂದ ಭಾರಿ ಅನಾಹುತ ತಪ್ಪಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ:  ವಿಷ ನೀಡಿ ನನ್ನ ಹತ್ಯೆಗೆ ಯತ್ನಿಸಿದ್ರು…ಇಸ್ರೋ ವಿಜ್ಞಾನಿ ಮಿಶ್ರಾ ಸ್ಫೋಟಕ ಹೇಳಿಕೆ

Advertisement

Udayavani is now on Telegram. Click here to join our channel and stay updated with the latest news.

Next