Advertisement

ಕುಡಿದು ಕಾರು ಅಪಘಾತ; ಸಿದ್ದರಾಮಯ್ಯ ಟ್ವೀಟ್ ಗೆ ಸಚಿವ ಸಿ.ಟಿ. ರವಿ ಉತ್ತರವೇನು ಗೊತ್ತಾ?

10:01 AM Oct 20, 2019 | Team Udayavani |

ಉತ್ತರಕನ್ನಡ: ಸಿದ್ದರಾಮಯ್ಯನವರು ಲಾ ಓದಿ ವಕೀಲರಾಗಿರುವುದು ನಾಲಾಯಕ್. ಅವರ ಮನಸ್ಥಿತಿ ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತೆ ಅಂದುಕೊಂಡಿರಲಿಲ್ಲ. ಸಿದ್ದರಾಮಯ್ಯನವರಿಗೆ ಯಾವ ಚಟವಿದೆ ಎಂಬುದನ್ನು ಸ್ಟಡಿ ಮಾಡಿಕೊಳ್ಳಲಿ ಎಂದು ಸಚಿವ ಸಿಟಿ ರವಿ ತಿರುಗೇಟು ನೀಡಿದ್ದಾರೆ.

Advertisement

ಗಾಂಧಿ ಕೊಂದವರಿಗೆ ಭಾರತ ರತ್ನ ಪ್ರಶಸ್ತಿ ಕೊಡುವುದಾದರೆ, ಕುಡಿದ ಅಮಲಿನಲ್ಲಿ ಕಾರು ಓಡಿಸಿ ಅಮಾಯಕರ ಪ್ರಾಣ ತೆಗೆದವರಿಗೆ ಕನಿಷ್ಠ ರಾಜ್ಯೋತ್ಸವ ಪ್ರಶಸ್ತಿಯನ್ನಾದರೂ ಕೊಡಬೇಕಲ್ಲವೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಶನಿವಾರ ಟ್ವೀಟ್ ಮಾಡುವ ಮೂಲಕ ಸಿ.ಟಿ.ರವಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಈ ಕುರಿತು ಉತ್ತರಕನ್ನಡದ ಕಾರವಾರದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರು ಕುಡಿದು ತೂರಾಡುತ್ತಾರೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ. ಅಲ್ಲದೇ ಸಿದ್ದರಾಮಯ್ಯನವರಿಗೆ ಯಾವೆಲ್ಲ ಚಟವಿದೆ ಎಂಬುದನ್ನು ಸ್ಟಡಿ ಮಾಡಲಿ ಎಂದು ಖಡಕ್ ತಿರುಗೇಟು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next