Advertisement

ಕುಂದಾಪುರ : ಬಸ್‌ ಚಲಾಯಿಸಿದ್ದಕ್ಕೆ ಚಾಲಕನಿಗೆ ಸಹೋದ್ಯೋಗಿಯಿಂದ ಜೀವ ಬೆದರಿಕೆ!

01:37 PM Apr 10, 2021 | Team Udayavani |

ಕುಂದಾಪುರ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೆ ಎಸ್‌ ಆರ್‌ ಟಿ ಸಿ ಬಸ್‌ ನೌಕರರು ಮುಷ್ಕರ ಕೈಗೊಂಡಿದ್ದು, ಅದಾಗಿಯೂ ಕುಂದಾಪುರದಲ್ಲಿ ಚಾಲಕರೊಬ್ಬರು ಬಸ್‌ ಚಲಾಯಿಸಿದ್ದಕ್ಕೆ ಅವರನ್ನು ನಿಂದಿಸಿ, ಜೀವ ಬೆದರಿಕೆ ಹಾಕಿದ ಘಟನೆ ಶನಿವಾರ ಬೆಳಕಿಗೆ ಬಂದಿದೆ.

Advertisement

ಮೂಲತಃ ಹೊನ್ನಾವರದ ಹಾಮಕ್ಕಿ ಕೂಳಿಮನೆ ನಿವಾಸಿ, ಕುಂದಾಪುರದ ಡಿಪೋದ ಚಾಲಕ ನಾಗರಾಜ ಎಂ. ನಾಯ್ಕ ಅವರನ್ನು ಕುಂದಾಪುರದ ಡಿಪೋದ ಚಾಲಕ ಸಹೋದ್ಯೋಗಿ ರವಿ ಎಂಬುವವರು ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ.

ನಾಗರಾಜ ಅವರು ಏ. 7 ರಂದು ರಾತ್ರಿ 8.15 ರ ಸುಮಾರಿಗೆ ಕುಂದಾಪುರದಿಂದ ಮೈಸೂರಿಗೆ ಹೋಗಲು ಬಸ್ಸನ್ನು ಕೆ ಎಸ್‌ ಆರ್‌ ಟಿ ಸಿ ಬಸ್‌ ನಿಲ್ದಾಣದ ಫ್ಲಾಟ್‌ ಫಾರಂನಲ್ಲಿ ತಂದು ನಿಲ್ಲಿಸಿದಾಗ ಸಹೋದ್ಯೋಗಿ ರವಿ ಕರೆ ಮಾಡಿ, ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆ ಹಾಕಿರುವುದಾಗಿ ದೂರು ನೀಡಿದ್ದಾರೆ. ಈ ಸಂಬಂಧ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next