Advertisement

ವಿಜಯ ಜ್ಯೋತಿಗೆ ಚಾಲನೆ

03:22 PM Jul 20, 2019 | Sriram |

ಹೊಸದಿಲ್ಲಿ: ಕಾರ್ಗಿಲ್‌ ವಿಜಯದ ನೆನಪಿಗಾಗಿ ದೇಶಾದ್ಯಂತ ಸಂಚರಿಸಲಿರುವ ವಿಜಯ ಜ್ಯೋತಿಗೆ ರವಿವಾರ ಹೊಸದಿಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕದಿಂದ ಚಾಲನೆ ನೀಡಲಾಗಿದೆ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಈ ವಿಜಯ ಜ್ಯೋತಿಗೆ ಚಾಲನೆ ನೀಡಿದರು. ಸೇನಾ ಮುಖ್ಯಸ್ಥ ಜ.ಬಿಪಿನ್‌ ರಾವತ್‌ ಕಾರ್ಗಿಲ್‌ ಯುದ್ಧದಲ್ಲಿ ಹುತಾತ್ಮರಿಗೆ ಗೌರವ ನಮನ ಸಲ್ಲಿಸಿದರು.

Advertisement

11 ನಗರಗಳು ಮತ್ತು ಪಟ್ಟಣಗಳ ಮೂಲಕ ಹಾದುಹೋಗ ಲಿರುವ ವಿಜಯ ಜ್ಯೋತಿ ಅಂತಿಮವಾಗಿ ಜಮ್ಮುವಿನ ದ್ರಾಸ್‌ನಲ್ಲಿರುವ ಕಾರ್ಗಿಲ್‌ ಯುದ್ಧ ಸ್ಮಾರಕಕ್ಕೆ ತಲುಪಲಿದೆ. ಬೈಕ್‌ನಲ್ಲಿ ಯೋಧರ ತಂಡ ಈ ಜ್ಯೋತಿ ಒಯ್ಯಲಿದೆ. ಇದರೊಂದಿಗೆ ಕಾರ್ಗಿಲ್‌ ವಿಜಯವನ್ನು ಸಂಭ್ರಮಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next