Advertisement

ವರುಣತೀರ್ಥ ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ

11:48 PM Jun 03, 2019 | Sriram |

ಕೋಟ: ಇತಿಹಾಸ ಪ್ರಸಿದ್ಧ ಕೋಟದ ವರುಣತೀರ್ಥ ಕೆರೆಯ ಹೂಳೆತ್ತುವ ಕಾರ್ಯ ಸ್ಥಳೀಯ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ಜೂ.2ರಂದು ಆರಂಭಗೊಂಡಿತು.

Advertisement

ರಾಜಶೇಖರ ದೇವಸ್ಥಾನದ ಪಕ್ಕದಲ್ಲಿರುವ ಈ ಕೆರೆ ಹತ್ತಾರು ವರ್ಷದ ಹಿಂದೆ ಈ ಭಾಗದ ಅಂತರ್ಜಲ ವೃದ್ಧಿ ಮತ್ತು ನೂರಾರು ಎಕರೆ ಕೃಷಿ ಭೂಮಿಗೆ ನೀರುಣಿಸುವಲ್ಲಿ ಸಹಕಾರಿಯಾಗಿತ್ತು. ಇತ್ತೀಚಿನ ದಿನಗಳಲ್ಲಿ ಇದರಲ್ಲಿ ಹೂಳುತುಂಬಿ ನೀರಿನ ಸಂಗ್ರಹಣೆ ಕುಂಠಿತವಾಗಿತ್ತು. ಇದನ್ನು ಮನಗಂಡ ಸ್ಥಳೀಯರು ಕೆರೆಯ ಹೂಳೆತ್ತಲು ಮುಂದಾಗಿದ್ದಾರೆ.ಸ್ಥಳೀಯ ಅಮೃತೇಶ್ವರೀ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ ಸಿ.ಕುಂದರ್‌ ನೇತೃತ್ವ ವಹಿಸಿದ್ದರು.ಸ್ಥಳೀಯ ಸಂಘಟನೆಗಳ ಸ್ವಯಂಸೇವಕರು ಹಾಗೂ ಗ್ರಾಮಸ್ಥರು ಹಿಟಾಚಿ ಬಳಸಿ ಕರಸೇವೆಯ ಮೂಲಕ ಈ ಕಾರ್ಯ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next