Advertisement

ದೇಗುಲ ನಿರ್ವಹಣಾ ಕೌಶಲ್ಯ ತರಬೇತಿ ಶಿಬಿರಕ್ಕೆ ಚಾಲನೆ

12:55 AM Feb 26, 2019 | Team Udayavani |

ಶಿರಸಿ: ದೇವಾಲಯಗಳಲ್ಲೂ ಶಿಸ್ತು ಅಳವಡಿಕೆ ಕುರಿತು ಅಲ್ಲಿನ ಸಿಬ್ಬಂದಿಗೆ, ಆಡಳಿತ ಪ್ರಮುಖರಿಗೆ, ಅರ್ಚಕರಿಗೆ ತರಬೇತಿ ನೀಡುವ ಕಾರ್ಯಯೋಜನೆ ಆರಂಭಿಸಲಾಗಿದೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ತಿಳಿಸಿದರು. 

Advertisement

ನಗರದಲ್ಲಿ ದೇಶದ ಪ್ರಥಮ ದೇವಸ್ಥಾನ, ಧಾರ್ಮಿಕ ಸಂಸ್ಥೆಗಳ ನಿರ್ವಹಣಾ ಕೌಶಲ್ಯ ತರಬೇತಿಯ ಮೂರು ದಿನಗಳ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. 

ಇದೇ ಮೊದಲಿಗೆ ಪ್ರಾಯೋಗಿಕವಾಗಿ ಇಲ್ಲಿ ತರಬೇತಿ ಆರಂಭಿಸಲಾಗುತ್ತಿದೆ. ನಮ್ಮ ಶ್ರದ್ಧಾ ಕೇಂದ್ರಗಳಲ್ಲಿನ ಸ್ವತ್ಛತೆ, ಆಡಳಿತಾತ್ಮಕ ಸೌಲಭ್ಯ, ನಿರ್ವಹಣೆ ಸೇರಿ ಅನೇಕ ಸಂಗತಿಗಳನ್ನು ತಿಳಿಸುವ ನಿಟ್ಟನಲ್ಲಿ ಎಲ್ಲೆಡೆ ಏಕರೂಪ ಶಿಸ್ತು ಅಳವಡಿಕೆಗೆ ಈ ತರಬೇತಿ ಅಗತ್ಯವಾಗಿದೆ ಎಂದರು. ಈಗಾಗಲೇ ಆಂಧ್ರ ಪ್ರದೇಶದ ಹೋರಾಟಗಾರ್ತಿ ಹೇಮಾ ರೆಡ್ಡಿ ಅವರ ಮೂಲಕ ತರಬೇತಿಗೆ ಅಗತ್ಯವಾದ ಪಠ್ಯವನ್ನೂ ಸಿದ್ಧಗೊಳಿಸಲಾಗಿದೆ. ತರಬೇತಿಯ ಅಗತ್ಯತೆ ಹಾಗೂ ಆಶಯದ ಕುರಿತು ಬಾಬಾ ರಾಮದೇವ್‌, ರವಿಶಂಕರ ಗುರೂಜಿ, ಮಾತಾ ಅಮೃತಾನಂದಮಯಿ ಅವರ ಜತೆ ಸಮಾಲೋಚನೆ ನಡೆಸಿ ಅಂತಿಮ ಹೆಜ್ಜೆ ಇಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next