Advertisement

ದವಸ-ಧಾನ್ಯ-ಧನ ಸಂಗ್ರಹಕ್ಕೆ ಚಾಲನೆ

10:51 AM Jan 05, 2019 | |

ದಾವಣಗೆರೆ: ನಗರದ ಶಿವಯೋಗಾಶ್ರಮದಲ್ಲಿ ಜ. 18ರಿಂದ 20ರ ವರೆಗೆ ನಡೆಯಲಿರುವ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳ 62ನೇ ಸ್ಮರಣೋತ್ಸವ ಹಾಗೂ ಶರಣ ಸಂಸ್ಕೃತಿ ಉತ್ಸವ ಅಂಗವಾಗಿ ದವಸ-ಧಾನ್ಯ, ಧನ ಸಂಗ್ರಹ ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

Advertisement

ಶುಕ್ರವಾರ, ಶಿವಯೋಗಾಶ್ರಮದ ಆವರಣದಲ್ಲಿ ವಿರಕ್ತಮಠದ ಚರಮೂರ್ತಿ ಶ್ರೀ ಬಸವಪ್ರಭು ಸ್ವಾಮೀಜಿ, ಧವಸ- ಧಾನ್ಯ-ಧನ ಸಂಗ್ರಹ ಕಾರ್ಯಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ವಿಶ್ವಗುರು ಬಸವಣ್ಣನವರು ಸಾರಿದ ಕಾಯಕ ಮತ್ತು ದಾಸೋಹದ ತತ್ವಗಳನ್ನು 20ನೇ ಶತಮಾನದಲ್ಲಿ ಬಡವಿದ್ಯಾರ್ಥಿಗಳಿಗಾಗಿ ಉಚಿತ ವಿದ್ಯಾರ್ಥಿ ನಿಲಯಗಳನ್ನು ಪ್ರಥಮವಾಗಿ ಸ್ಥಾಪಿಸುವುದರ ಮೂಲಕ ಸಾಮಾಜಿಕ, ಧಾರ್ಮಿಕ, ಶಿಕ್ಷಣ ಕ್ರಾಂತಿ ಮಾಡಿದವರು ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮೀಜಿ ಎಂದು ಸ್ಮರಿಸಿದರು.

ಜಗದ್ಗುರುಗಳು ಲಿಂಗೈಕ್ಯರಾಗಿ 62 ವರ್ಷಗಳು ಪೂರೈಸಿವೆ. ಅವರು ಧಾರ್ಮಿಕ ಹಾಗೂ ರಾಷ್ಟ್ರ ಕಲ್ಯಾಣಕ್ಕಾಗಿ ಮಾಡಿರುವ ಅಗಣಿತ ಮಹಾಕಾರ್ಯ, ಸಾಧನೆ ಸ್ಮರಿಸುವುದು ಹಾಗೂ ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಈ ವರ್ಷವೂ ಜ. 18, 19, ಹಾಗೂ 20ರಂದು ಮೂರು ದಿನಗಳ ಕಾಲ ಅವರ ಸ್ಮರಣೋತ್ಸವ ಹಾಗೂ ಶರಣ ಸಂಸ್ಕೃತಿ ಉತ್ಸವ, ಸಹಜ ಶಿವಯೋಗ ಕಾರ್ಯಕ್ರಮ ಚಿತ್ರದುರ್ಗದ ಡಾ| ಶ್ರೀ ಶಿವಮೂರ್ತಿ ಮುರುಘಾ ಶರಣರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದರು. 

ಕಾರ್ಯಕ್ರಮದ ಯಶಸ್ಸಿಗೆ ಎಲ್ಲಾ ಭಕ್ತರ ಸಹಾಯ, ಸಹಕಾರ ಅಗತ್ಯ. ಶ್ರೀ ಜಯದೇವ ಜಗದ್ಗುರುಗಳ ಸ್ಮರಣೋತ್ಸವಕ್ಕೆ ಉದಾರವಾಗಿ ದವಸ, ಧಾನ್ಯ, ಧನ ನೀಡುವುದರ ಜತೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.

Advertisement

ಈ ಸಂದರ್ಭದಲ್ಲಿ ಮಠದ ಸಮಿತಿಯ ಕುಂಟೋಜಿ ಚನ್ನಪ್ಪ, ಲಂಬಿ ಮುರುಗೇಶಪ್ಪ, ಶರಣಬಸವ, ಚಂದ್ರಶೇಖರಯ್ಯ, ಸರ್ಪಭೂಷಣ, ಕೀರ್ತಿಕುಮಾರ್‌, ನಾಗರಾಜ್‌, ಉಮಾಪತಿ, ಸಂಗಮೇಶ್‌, ನೂರುಲ್ಲಾ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next