Advertisement

ದಾವಣಗೆರೆಯಲ್ಲಿ ಮಹಿಳೆಯರ ರಕ್ಷಣೆಗಾಗಿ ದುರ್ಗಾಪಡೆಗೆ ಚಾಲನೆ

03:50 PM Oct 02, 2019 | Team Udayavani |

ದಾವಣಗೆರೆ: ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ದುರ್ಗಾಪಡೆ ಗೆ ಚಾಲನೆ ನೀಡಲಾಯಿತು.

Advertisement

ಜಿ.ಪಂ ಅಧ್ಯಕ್ಷೆ ಶೈಲಜಾ ಬಸವರಾಜ್ ಪಡೆಗೆ ಚಾಲನೆ ನೀಡಿದರು.ಮಹಿಳೆಯರು ಮತ್ತು ಮಕ್ಕಳಿಗೆ ರಕ್ಷಣೆ, ತೊಂದರೆಯಲ್ಲಿ ಇದ್ದವರಿಗೆ ತುರ್ತು ನೆರವು, ರೋಡ್ ರೋಮಿಯೋ ನಿಯಂತ್ರಣ ಕ್ರಮ ತೆಗೆದುಕೊಳ್ಳುವ ಉದ್ದೇಶದ ದುರ್ಗಾಪಡೆಯನ್ನ ನಿರ್ಭಯ ಯೋಜನೆಯಡಿ ರಚಿಸಲಾಗಿದೆ.

ಜಿಲ್ಲಾಧಿಕಾರಿ ಮಹಾಂತೇಶ ಜಿ. ಬೀಳಗಿ, ಅಪರ ಡಿಸಿ ನಜ್ಮಾ, ಎಸ್ಪಿ ಹನುಮಂತರಾಯ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next