Advertisement

ಬೆಂಬಲ ಬೆಲೆ ಆಧಾರಿತ ರಾಗಿ ಖರೀದಿಗೆ ಚಾಲನೆ

09:09 PM Apr 01, 2022 | Team Udayavani |

ನವದೆಹಲಿ: ಕರ್ನಾಟಕ ಸರ್ಕಾರ, ರೈತರಿಂದ ರಾಗಿಯನ್ನು ಬೆಂಬಲ ಬೆಲೆ ಆಧಾರದಲ್ಲಿ ಕೊಳ್ಳಲಾರಂಭಿಸಿದೆ. ಕೇಂದ್ರದಿಂದ ಒಪ್ಪಿಗೆ ಪಡೆಯಲಾಗಿದೆ ಎಂದು ಕೇಂದ್ರ ಕೃಷಿ ಸಚಿವ ಪಿಯೂಶ್‌ ಗೋಯಲ್‌ ರಾಜ್ಯಸಭೆಗೆ ತಿಳಿಸಿದ್ದಾರೆ.

Advertisement

ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ಸಂಸದ ಎಚ್‌.ಡಿ.ದೇವೇಗೌಡ, “ಕರ್ನಾಟಕದಲ್ಲಿ ಬೆಳೆಯಲಾಗಿರುವ 7 ಲಕ್ಷ ಟನ್‌ ರಾಗಿಯನ್ನು ಬೆಂಬಲ ಬೆಲೆಯ ಆಧಾರದಲ್ಲಿ ಕೊಳ್ಳಲು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಮೆಕ್ಕೆಜೋಳದ ವಿಚಾರದಲ್ಲೂ ಇದೇ ರೀತಿಯಾಗಿದೆ. ರಾಗಿ ಮತ್ತು ಮೆಕ್ಕೆಜೋಳವನ್ನು ಬೆಳೆಯುವ ಏಕೈಕ ರಾಜ್ಯ ಕರ್ನಾಟಕ.

ಹಾಗಿದ್ದರೂ, ಬೆಂಬಲ ಬೆಲೆ ಆಧಾರಿತ ಖರೀದಿಗೆ ಇನ್ನೂ ಚಾಲನೆ ನೀಡಲಾಗಿಲ್ಲ” ಎಂದು ವಿಷಾದಿಸಿದರು.

ಇದಕ್ಕೆ ಮೇಲಿನಂತೆ ಉತ್ತರಿಸಿದ ಗೋಯಲ್‌, ಮೆಕ್ಕೆಜೋಳ ಮೇಲಿನ ಬೆಂಬಲ ಬೆಲೆ ಕುರಿತ ಕರ್ನಾಟಕದ ಪ್ರಸ್ತಾವನೆಗೆ ಇನ್ನೂ ಕೇಂದ್ರದ ಒಪ್ಪಿಗೆ ಸಿಕ್ಕಿಲ್ಲವಾದ್ದರಿಂದ ಸದ್ಯಕ್ಕೆ ಮೆಕ್ಕೆಜೋಳದ ಖರೀದಿ ಆರಂಭವಾಗಿಲ್ಲ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next