Advertisement

ಜಿಲ್ಲಾ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್‌ಗೆ ಚಾಲನೆ

11:51 PM Nov 06, 2019 | Team Udayavani |

ಉಡುಪಿ: ಮಕ್ಕಳ ಹಕ್ಕು ಮತ್ತು ಅದರ ಬಳಕೆ ಕುರಿತು ತಿಳಿದುಕೊಳ್ಳುವುದು ಪ್ರತಿಯೊಬ್ಬ ಪೋಷಕರು ಹಾಗೂ ಮಕ್ಕಳ ಕರ್ತವ್ಯವಾಗಿದೆ ಎಂದು ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ತಿಳಿಸಿದರು.

Advertisement

ಬೆಂಗಳೂರು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ, ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರ, ಮಂಗಳೂರು ಪಡಿ ಸಂಸ್ಥೆ, ಜಿ.ಪಂ., ಜಿಲ್ಲಾ ಎಸ್‌ಡಿಎಂಸಿ ಸಮನ್ವಯ ವೇದಿಕೆ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಸಂತೆಕಟ್ಟೆ ಲಯನ್ಸ್‌ ಕ್ಲಬ…, ಉಡುಪಿ ಲಿಯೋ ಕ್ಲಬ್‌ ಹಾಗೂ ಸ್ವತ್ಛ ಭಾರತ್‌ ಫ್ರೆಂಡ್ಸ್‌ , ಉಡುಪಿ ಸಿಟಿ ಜೆಸಿಐ ಸಹಯೋಗದಲ್ಲಿ ಬುಧವಾರ ಅಟಲ್‌ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಹೆತ್ತವರು, ಶಿಕ್ಷಕರ ಪಾತ್ರ ಅತಿಮುಖ್ಯವಾಗಿದೆ. ಮಕ್ಕಳ ಉಜ್ವಲ ಭವಿಷ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು. ಮಕ್ಕಳ ಹಕ್ಕುಗಳ ಕುರಿತ ಹೆಚ್ಚಿನ ಮಾಹಿತಿ ಪಡೆಯಲು ಮಕ್ಕಳ ಹಕ್ಕುಗಳ ಸಂಸತ್‌ ಸಹಕಾರಿಯಾಗಿದ್ದು, ಮಕ್ಕಳು ಇದರ ಪ್ರಯೋಜನ ಪಡೆದುಕೊಂಡು ಜಿಲ್ಲೆಯನ್ನು ರಾಜ್ಯಮಟ್ಟದಲ್ಲಿ ಪ್ರತಿನಿಧಿಸಲು ಉತ್ತಮ ವೇದಿಕೆಯಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ದಿವಾಕರ್‌ ಕುಮಾರ್‌, ಉದ್ಯಮಿ ಅಮೃತ್‌ ಶೆಣೈ, ಉಡುಪಿ ಜಿಲ್ಲೆ 317ಸಿ ಲಿಯೋ ಕ್ಲಬ್‌ ಅಧ್ಯಕ್ಷ ಫೌಜಾನ್‌ ಅಕ್ರಂ, ಜಿಲ್ಲಾ ಸಂಯೋಜಕ ಮಹಮ್ಮದ್‌, ಸಂತೆಕಟ್ಟೆ ಲಯನ್ಸ್‌ ಕ್ಲಬ್‌ ರಾಜೇಶ್‌ ಎಸ್‌., ಸ್ವತ್ಛ ಭಾರತ ಫ್ರೆಂಡ್ಸ್‌ ಸ್ಥಾಪಕ ಗಣೇಶ್‌ ಪ್ರಸಾದ್‌ ಜಿ. ನಾಯಕ್‌, ಜೆಸಿ ಕ್ಲಬ್‌ ಅಧ್ಯಕ್ಷ ರಾಘವೇಂದ್ರ ಪ್ರಭು ಕರ್ವಾಲು, ಎಸ್‌ಡಿಎಂಸಿ ಉಷಾ ರಮೇಶ್‌ ಉಪಸ್ಥಿತರಿದ್ದರು.
ಪ್ರಭಾಕರ್‌ ಆಚಾರ್ಯ ಕಾರ್ಯ ಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next