Advertisement

ಶಿರ್ವ: ಮುಖ್ಯ ರಸ್ತೆಯಲ್ಲಿ ಕುಡಿಯವ ನೀರು ಪೋಲು

11:00 PM Mar 15, 2021 | Team Udayavani |

ಶಿರ್ವ: ಆತ್ರಾಡಿ- ಶಿರ್ವ-ಬಜ್ಪೆ ರಾಜ್ಯ ಹೆದ್ದಾರಿಯ ಶಿರ್ವ-ಬೆಳ್ಮಣ್‌ ಮುಖ್ಯ ರಸ್ತೆಯ ಪ್ರಕಾಶ್‌ ಟ್ರೇಡರ್ ಅಂಗಡಿಯ ಬಳಿ ಮುಖ್ಯ ರಸ್ತೆಯಲ್ಲಿಯೇ ನೀರಿನ ಪೈಪ್‌ಲೈನ್‌ಒಡೆದು ಕುಡಿಯುವ ನೀರು ಪೋಲಾಗುತ್ತಿದೆ.

Advertisement

ಸುಮಾರು 3 ವರ್ಷಗಳ ಹಿಂದೆ ಆತ್ರಾಡಿ-ಶಿರ್ವ-ಬಜ್ಪೆ ರಾಜ್ಯ ಹೆದ್ದಾರಿ ವಿಸ್ತರಣೆ ಕಾಮಗಾರಿಯ ವೇಳೆ ನೀರಿನ ಪೈಪ್‌ಲೈನನ್ನು ಸಮರ್ಪಕವಾಗಿ ಅಳವಡಿಸದೇ ಇದ್ದುದರಿಂದ ಹಳೆಯ ಪೈಪು ಒಡೆದು ಸುಮಾರು 3 ತಿಂಗಳುಗಳಿಂದ ನೀರು ಪೋಲಾಗುತ್ತಿದೆ.
ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯತ್‌ ಸ್ಥಳೀಯಾಡಳಿತ ಬಿರು ಬೇಸಗೆಯಲ್ಲಿ ಕುಡಿಯುವ ನೀರು ಪೋಲಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶಿರ್ವ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಗದ ಅಧ್ಯಕ್ಷ ರಮೇಶ್‌ ಬಂಗೇರ ಆಗ್ರಹಿಸಿದ್ದಾರೆ.

ದುರಸ್ತಿಗೆ ಕ್ರಮ
ಲೋಕೋಪಯೋಗಿ ಇಲಾಖೆಯ ಅನುಮತಿ ಪಡೆದು ಪೈಪ್‌ಲೈನ್‌ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು.

-ಅನಂತ ಪದ್ಮನಾಭ ನಾಯಕ್‌, ಪಿಡಿಒ, ಶಿರ್ವ

Advertisement

Udayavani is now on Telegram. Click here to join our channel and stay updated with the latest news.

Next