Advertisement

ಕುಡಿವ ನೀರು ಸಮರ್ಪಕ ಪೂರೈಕೆಗಾಗಿ ರಸ್ತೆ ತಡೆದು ಪ್ರತಿಭಟನೆ

09:10 AM May 22, 2019 | Team Udayavani |

ರೋಣ: ಕಳೆದ ಮೂರು ವಾರಗಳಿಂದ ನೀರು ಬಾರದಿರುವುದನ್ನು ಖಂಡಿಸಿ ಪಟ್ಟಣದ 21ನೇ ವಾರ್ಡ್‌ ನಿವಾಸಿಗಳು ರೋಣ-ನರಗುಂದ ರಸ್ತೆ ತಡೆದು ಪ್ರತಿಭಟಿಸಿದರು.

Advertisement

ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಪುರಸಭೆ ನೀರು ಸರಬರಾಜು ಸಿಬ್ಬಂದಿ ಬಸವರಾಜ ಕಿರೇಸೂರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, 21ನೇ ವಾರ್ಡ್‌ಗೆ ನೀರು ಪೂರೈಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ನಿವಾಸಿಗಳು ಪ್ರತಿಭಟನೆ ಹಿಂಪಡೆದರು.

ಗೀತಾ ನವಲಗುಂದ, ರೇಣುಕಾ ಹಾಳಕೇರಿ, ಸಾವಿತ್ರಿ ಸೂಡಿ, ದಾವಲಬೀ ಡಲಾವತ, ಸಾವಿತ್ರಿ ಜಾಧವ, ಸೈನಾಜಬೀ ಮುಲ್ಲಾ, ಬಾಬು ದಳವಾಯಿ, ಪ್ರಭು ಸೂಡಿ, ಸಂಗಮೇಶ ಹಿರೇಮಠ, ಬಸವರಾಜ ಚೊಳಚಗುಡ್ಡ, ಪ್ರಭು ಪಾಟೀಲ, ಬುಡ್ನೇಸಾಬ ಕೊಲ್ಕಾರ, ಮಕ್ತುಮಸಾಬ ಮುಲ್ಲಾ, ಹುಸೇನಸಾಬ ಅರಮನಿ, ಮಕ್ತುಮಸಾಬ ಗೋನಾಳ, ಅಬ್ದುಲ್ ಇದ್ಲಿ ಸೇರಿದಂತೆ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next