Advertisement

ವಿಷ ಕುಡಿದು ನಾಟಕವಾಡಿ ಪ್ರಿಯಕರನೊಂದಿಗೆ ಪರಾರಿ

11:55 PM Jun 09, 2019 | Lakshmi GovindaRaj |

ಶಿರಾ: ತುಮಕೂರು ಜಿಲ್ಲೆ ಶಿರಾ ತಾಲೂಕಿನ ತಾವರೆಕೆರೆ ಪೊಲೀಸ್‌ ಠಾಣಾ ವ್ಯಾಪ್ತಿಯ ಮೆಳೆಕೋಟೆಯಲ್ಲಿ ಹಸೆಮಣೆ ಏರಬೇಕಿದ್ದ ವಧು, ವಿಷ ಕುಡಿದಂತೆ ನಾಟಕವಾಡಿ, ಆಸ್ಪತ್ರೆಯಿಂದ ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ.

Advertisement

ಮೆಳೆಕೋಟೆಯ ನಯನಾಳನ್ನು ಶಿರಾ ತಾಲೂಕು ದೊಡ್ಡಗುಳ ಗ್ರಾಮದ ಬಿಎಂಟಿಸಿ ನೌಕರ ಮಂಜುನಾಥ್‌ ಎಂಬುವರ ಜೊತೆ ಭಾನುವಾರದಂದು ವಿವಾಹ ಮಾಡುವುದೆಂದು ನಿಶ್ಚಯಿಸಲಾಗಿತ್ತು. ವಧುವಿನ ಮನೆಯಲ್ಲಿ ಪ್ರಥಮ ಶಾಸ್ತ್ರದ ಕಾರ್ಯಕ್ರಮಗಳು ಆರಂಭಗೊಂಡಿದ್ದವು.

ಹಸಿರು ಚಪ್ಪರ, ವಿವಾಹದ ಸ್ವಾಗತ ಕಮಾನು ಎಲ್ಲವೂ ಸಿದ್ಧಗೊಂಡು, ನೆಂಟರು, ಹಿತೈಷಿಗಳು ಮದುವೆಗೆಂದು ಆಗಮಿಸಿದ್ದರು. ಈ ಮಧ್ಯೆ, ಶನಿವಾರ ರಾತ್ರಿ ವಧು, ತನ್ನ ಮೈಮೇಲೆ ವಿಷಯುಕ್ತ ದ್ರಾವಣ ಸಿಂಪಡಿಸಿಕೊಂಡು, ವಿಷ ಸೇವಿಸಿರುವ ನಾಟಕವಾಡಿದಳು.

ಗಾಬರಿಗೊಂಡ ಮನೆಯವರು ತಕ್ಷಣವೇ ವಧುವನ್ನು ಶಿರಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿಂದ ಆಕೆ ಅತ್ತೆಯ ಮಗ, ಆನೆಸಿದ್ರಿಯ ಚೇತನ್‌ ಕುಮಾರ್‌ ಎಂಬಾತನ ಜೊತೆ ಪರಾರಿಯಾಗಿದ್ದಾಳೆ. ತಾವರೆಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next