Advertisement

ವಾಸ್ತವ ಕನಸು ಕಾಣಿ: ಡಾ|ಹೆಗ್ಗಡೆ

11:32 AM Jun 29, 2019 | Team Udayavani |

ಧಾರವಾಡ: ಪ್ರತಿಯೊಬ್ಬರಿಗೂ ಕನಸುಗಳಿರಬೇಕು ಆದರೆ ಆ ಕನಸುಗಳು ವಾಸ್ತವವಾಗಿರಬೇಕು ಎಂದು ರುಡ್‌ಸೆಟ್ ಸಂಸ್ಥೆ ಅಧ್ಯಕ್ಷರಾದ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

Advertisement

ಇಲ್ಲಿಯ ಗಾಂಧಿನಗರದ ರುಡ್‌ಸೆಟ್ ಸಂಸ್ಥೆಕ್ಕೆ ಭೇಟಿ ನೀಡಿ ಬ್ಯೂಟಿ ಪಾರ್ಲರ್‌, ಮಹಿಳಾ ವಸ್ತ್ರ ವಿನ್ಯಾಸ, ಕಂಪ್ಯೂಟರ್‌ ಡಿಟಿಪಿ ಸಮುದಾಯ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನೀವು ನಿಮ್ಮಲ್ಲಿರುವ ಶಕ್ತಿಯನ್ನು ಗುರುತಿಸಿಕೊಂಡು ಗುರಿ ತಲುಪಬೇಕು ಎಂದು ಸಲಹೆ ನೀಡಿದರು.

ಉದ್ಯಮದಲ್ಲಿ ಯಶಸ್ಸು ಕಾಣಬೇಕಾದರೆ ಉತ್ತಮ ಗ್ರಾಹಕರ ಸೇವೆ, ವ್ಯವಹಾರದಲ್ಲಿ ಗುಣಮಟ್ಟ, ಸಮಯ ನಿರ್ವಹಣೆ, ಆತ್ಮವಿಶ್ವಾಸ ಬಹಳ ಮುಖ್ಯ. ರುಡ್‌ಸೆಟ್ ಸಂಸ್ಥೆ ಒಳ್ಳೆಯ ರೀತಿಯಲ್ಲಿ ತರಬೇತಿ ನೀಡುತ್ತಿದೆ. ಅದನ್ನು ಸರಿಯಾಗಿ ಉಪಯೋಗಿಸಿಕೊಂಡು ಉದ್ಯಮದಾರರಾಗಿರೆಂದು ಸಲಹೆ ನೀಡಿದರು.

ಎಸ್‌ಡಿಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಜೀವನಧರಕುಮಾರ, ಕುಮಾರ ಎಮ್‌, ಪ್ರೀತಿ ತಬಜ್‌, ಗೌರಿ ಕೋರಿಶೆಟ್ಟರ ಹಾಗೂ ಸಿಬ್ಬಂದಿ ವರ್ಗದವರು ಇದ್ದರು. ಸಂಸ್ಥೆಯ ನಿರ್ದೇಶಕ ರಾಜೇಂದ್ರ ಕಗ್ಗೋಡಿ ಸ್ವಾಗತಿಸಿದರು. ಜಗದೀಶ ಪೂಜಾರ, ಚನ್ನಪ್ಪ ದೇವಗಿರಿ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next