Advertisement

ದ್ರಾವಿಡ್‌ ಹಿತಾಸಕ್ತಿ ಸಂಘರ್ಷ ವಿಚಾರಣೆ ಅಂತ್ಯ

12:09 AM Nov 13, 2019 | sudhir |

ಹೊಸದಿಲ್ಲಿ: ಮಾಜಿ ಕ್ರಿಕೆಟಿಗ, ಹಾಲಿ ಎನ್‌ಸಿಎ ಮುಖ್ಯಸ್ಥ ರಾಹುಲ್‌ ದ್ರಾವಿಡ್‌ ಅವರ “ಹಿತಾಸಕ್ತಿ ಸಂಘರ್ಷ’ ಕುರಿತ ಸುದೀರ್ಘ‌ ವಿಚಾರಣೆ ಅಂತ್ಯವಾಗಿದೆ. ಶೀಘ್ರದಲ್ಲೇ ತೀರ್ಪು ಪ್ರಕಟಿಸಲಾಗುತ್ತದೆ ಎಂದು ಬಿಸಿಸಿಐ ನೀತಿಸಂಹಿತೆ ಅಧಿಕಾರಿ ಡಿ.ಕೆ. ಜೈನ್‌ ತಿಳಿಸಿದ್ದಾರೆ.

Advertisement

ಮಂಗಳವಾರ ಮಾತನಾಡಿದ ಅವರು, “ವಿಚಾರಣೆಗೆ ಬಿಸಿಸಿಐ ಪರವಾಗಿ ಓರ್ವ ವಕೀಲರು ಬಂದಿದ್ದರು. ದ್ರಾವಿಡ್‌ ವಿರುದ್ಧ ಹಿತಾಸಕ್ತಿ ಸಂಘರ್ಷದ ಕೇಸು ದಾಖಲಿಸಿದ್ದ ಮಧ್ಯಪ್ರದೇಶ ಕ್ರಿಕೆಟ್‌ ಸಂಸ್ಥೆಯ ಆಜೀವ ಸದಸ್ಯ ಸಂಜೀವ್‌ ಗುಪ್ತಾ ಕೂಡ ಆಗಮಿಸಿದ್ದರು. ದ್ರಾವಿಡ್‌ ಅವರನ್ನು ಎನ್‌ಸಿಎನಿಂದ ಪದಚ್ಯುತಗೊಳಿಸುವ ಉದ್ದೇಶ ನಮ್ಮದಲ್ಲ. ಕೆಲವು ಅನುಮಾನಗಳಿದ್ದವು. ಅದನ್ನು ಪರಿಹರಿಸಿಕೊಳ್ಳಬೇಕಾಗಿತ್ತು, ಅಷ್ಟೇ…’ ಎಂದು ಜೈನ್‌ ತಿಳಿಸಿದರು.

ಸೆ. 26ರಂದು ನಡೆದ ಬಿಸಿಸಿಐ ವಿಚಾರಣೆ ವೇಳೆ ರಾಹುಲ್‌ದಾÅವಿಡ್‌ ತಮ್ಮನ್ನು ಸಮರ್ಥಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next