Advertisement

ಹುಬ್ಬಳ್ಳಿ ಕ್ರಿಕೆಟ್ ಮೈದಾನಗಳಿಗೆ ದ್ರಾವಿಡ್‌ ಭೇಟಿ

01:08 PM Jun 10, 2019 | Suhan S |

ಹುಬ್ಬಳ್ಳಿ: ಭಾರತ ‘ಎ’ ತಂಡದ ಮುಖ್ಯ ತರಬೇತುದಾರ ರಾಹುಲ್ ದ್ರಾವಿಡ್‌ ಅವರು ನಗರದ ಕೆಎಸ್‌ಸಿಎ ಮೈದಾನ ಸೇರಿದಂತೆ ವಿವಿಧ ಕ್ರಿಕೆಟ್ ಮೈದಾನಗಳಿಗೆ ರವಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಬೆಳಗ್ಗೆ ರಾಜನಗರದ ಕೆಎಸ್‌ಸಿಎ ಮೈದಾನಕ್ಕೆ ಭೇಟಿ ನೀಡಿ ಪರಿಶೀಲಿಸಿದರಲ್ಲದೆ ಕೈಗೊಳ್ಳಬೇಕಾದ ಕಾರ್ಯಗಳ ಕುರಿತು ಮಹತ್ವದ ಸಲಹೆಗಳನ್ನು ನೀಡಿದರು. ಬೆಳಗಾವಿಯಲ್ಲಿರುವ ಕೆಎಸ್‌ಸಿಎ ಮೈದಾನ ಹಾಗೂ ಹುಬ್ಬಳ್ಳಿ ಕೆಎಸ್‌ಸಿಎ ಮೈದಾನ ಕೇವಲ 100 ಕಿಮೀ ಅಂತರದಲ್ಲಿದ್ದು, ಹೆಚ್ಚಿನ ಪಂದ್ಯಗಳನ್ನು ಇಲ್ಲಿ ಆಡಿಸುವ ಕುರಿತು ಚಿಂತನೆ ನಡೆದಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರೆನ್ನಲಾಗಿದೆ. ನಗರದಲ್ಲಿರುವ ಬಾಣಾಜಿ ಡಿ. ಖೀಮಜಿ ಮೈದಾನ, ಕರ್ನಾಟಕ ಜಿಮಖಾನ್‌ ಮೈದಾನಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಬಿಸಿಸಿಐನ ರಾಹಿಲ್ ಖ್ವಾಜಾ, ಕೆಎಸ್‌ಸಿಎ ಧಾರವಾಡ ಜಿಲ್ಲಾ ಸಂಯೋಜಕ ಬಾಬಾ ಭೂಸದ, ಶಿವಾನಂದ ಗುಂಜಾಳ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next