Advertisement

ಸ್ವಹಿತಾಸಕ್ತಿ ನಿವಾರಣೆ: ಎನ್‌ಸಿಎ ಅಧಿಕಾರ ಸ್ವೀಕರಿಸಿದ ದ್ರಾವಿಡ್‌

02:48 AM Jul 10, 2019 | sudhir |

ಬೆಂಗಳೂರು: ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್‌ಸಿಎ) ಮುಖ್ಯಸ್ಥರಾಗಿ ರಾಹುಲ್ ದ್ರಾವಿಡ್‌ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಜುಲೈ ಒಂದರಂದೇ ಅವರು ಅಧಿಕಾರ ಸ್ವೀಕರಿಸಬೇಕಾಗಿದ್ದರೂ, ಸ್ವಹಿತಾಸಕ್ತಿ ಸಂಘರ್ಷ ಎದುರಿಸಿದ್ದರಿಂದ ಸೋಮ ವಾರದ ವರೆಗೆ ಕಾಯಬೇಕಾಯಿತು.

Advertisement

ದ್ರಾವಿಡ್‌ ಭಾರತ ಕ್ರಿಕೆಟ್ ಬೆಳವಣಿಗೆಯ ಸಂಪೂರ್ಣ ಹೊಣೆ ಹೊತ್ತುಕೊಳ್ಳಲಿದ್ದಾರೆ. ವಲಯ ವಾರು ತರಬೇತುದಾರರ ನೇಮಕ, ಎ ತಂಡ, ಕಿರಿಯರ ತಂಡದ ಮೇಲ್ವಿಚಾರಣೆ, ಮಹಿಳಾ ಕ್ರಿಕೆಟ್ ಬೆಳವಣಿಗೆಯ ಸಂಪೂರ್ಣ ಹೊಣೆ ಹೊತ್ತುಕೊಳ್ಳಲಿದ್ದಾರೆ. ಭಾರತ ಕ್ರಿಕೆಟ್ ತಂಡದ ಭವಿಷ್ಯದ ಪೀಳಿಗೆಯನ್ನು ರೂಪಿಸುವುದು ದ್ರಾವಿಡ್‌ ಮೇಲಿರುವ ನೇರ ಹೊಣೆಗಾರಿಕೆ.

ದ್ರಾವಿಡ್‌ ಅವರು ಎನ್‌. ಶ್ರೀನಿವಾಸನ್‌ ಮಾಲಕತ್ವದ ಇಂಡಿಯಾ ಸಿಮೆಂಟ್ಸ್‌ ಉಪಾಧ್ಯಕ್ಷರಾ ಗಿದ್ದರು. ಆದ್ದರಿಂದ ಅವರಿಗೆ ಸ್ವಹಿತಾಸಕ್ತಿ ಸಮಸ್ಯೆ ಎದುರಾಗಿತ್ತು. ಬಿಸಿಸಿಐ ಆಡಳಿತಾಧಿಕಾರಿಗಳು ಆ ಹುದ್ದೆಯನ್ನು ತ್ಯಜಿಸುವಂತೆ ದ್ರಾವಿಡ್‌ಗೆ ಸೂಚಿಸಿದ್ದರು. ಹುದ್ದೆ ತ್ಯಜಿಸಿರುವ ಕಾರಣ ದ್ರಾವಿಡ್‌ ಎನ್‌ಸಿಎ ಮುಖ್ಯಸ್ಥರಾಗಲು ಇರುವ ಎಲ್ಲ ಅಡೆತಡೆಗಳು ನಿವಾರಣೆಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next