Advertisement

ಡ್ರಾಮಾ ಜೂನಿಯರ್ಸ್‌ ಶ್ರಾವ್ಯಾಗೆ ಅದ್ದೂರಿ ಸ್ವಾಗತ

03:21 PM Jan 01, 2018 | |

ತೆಕ್ಕಟ್ಟೆ: ಸಮಸ್ತ ಕನ್ನಡಿಗರ ಮನಸೂರೆಗೊಳಿಸಿದ ಝೀ ಕನ್ನಡ ವಾಹಿನಿಯ ಡ್ರಾಮಾ ಜೂನಿಯರ್ಸ್‌ – 2ನಲ್ಲಿ ಕುಂದಾಪುರ ತಾಲೂಕಿನ ಮರವಂತೆಯ ಶ್ರಾವ್ಯಾ ಎಸ್‌.ಆಚಾರ್ಯ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದ ಡ್ರಾಮಾ ಜೂನಿಯರ್ಸ್‌ ಗ್ರ್ಯಾಂಡ್ ಫಿನಾಲೆಯಲ್ಲಿ ಸೆಕೆಂಡ್‌ ರನ್ನರ್‌ ಅಪ್‌ ವಿಜೇತೆಯಲ್ಲಿ ಡಿ. 31ರಂದು ತೆಕ್ಕಟ್ಟೆಯಲ್ಲಿ ಅದ್ದೂರಿಯಾಗಿ ಭರಮಾಡಿಕೊಂಡರು. ಶಂಕರ ಆಚಾರ್ಯ ಹಾಗೂ ಗೀತಾ ಆಚಾರ್ಯ ಹೆತ್ತವರೊಂದಿಗೆ ಶ್ರಾವ್ಯಾ ಎಸ್‌. ಆಚಾರ್ಯ  ತೆಕ್ಕಟ್ಟೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. 

Advertisement

ತೆಕ್ಕಟ್ಟೆ ಫ್ರೆಂಡ್ಸ್‌ ತೆಕ್ಕಟ್ಟೆ ಹಾಗೂ ಕನ್ನುಕೆರೆ ಫ್ರೆಂಡ್ಸ್‌ ಕನ್ನುಕೆರೆ ಸಹಕಾರದೊಂದಿಗೆ ತೆರೆದ ವಾಹನದ ಮೂಲಕ ತೆಕ್ಕಟ್ಟೆಯಿಂದ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಮಹಾದ್ವಾರದ ವರೆಗೆ ರಾ. ಹೆ. 66 ರಲ್ಲಿ ಬೈಕ್‌ ರ್ಯಾಲಿಯೊಂದಿಗೆ ಮೆರವಣಿಗೆ ಸಾಗಿ ಬಂತು ನಂತರ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ತೆರಳಿ ಶ್ರೀದೇವರ ದರ್ಶನ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next