Advertisement

ಡಾ. ವಿಷ್ಣು ನೆನಪಲ್ಲಿ ಹೃದಯ ಗೀತೆ

11:18 AM Sep 16, 2018 | |

ಸೆಪ್ಟೆಂಬರ್‌ 18ರಂದು  ಡಾ. ವಿಷ್ಣುವರ್ಧನ್‌ ಅವರ ಹುಟ್ಟುಹಬ್ಬ. ಈ ಬಾರಿ ಅವರ 68ನೇ ಜನ್ಮದಿನದ ಅಂಗವಾಗಿ ವಿಭಾ ಚಾರಿಟಬಲ್‌ ಟ್ರಸ್ಟ್‌ ಹಾಗೂ ರೋಟರಿ ಬೆಂಗಳೂರು ಸೌಥ್‌ ಈಸ್ಟ್‌ ಸಂಯೋಜನೆಯಲ್ಲಿ ಶುಕ್ರವಾರ (ಸೆಪ್ಟೆಂಬರ್‌ 14) “ಹೃದಯ ಗೀತೆ’ ಎಂಬ ಸಂಗೀತ ಕಾರ್ಯಕ್ರಮ ಚೌಡಯ್ಯ ಮೆಮೋರಿಯಲ್‌ ಹಾಲ್‌ನಲ್ಲಿ ನಡೆಯಿತು.

Advertisement

ಆ ಕಾರ್ಯಕ್ರಮದಿಂದ ಬಂದಂತಹ ಹಣ ಸುಮಾರು 140 ಮಕ್ಕಳ ಹೃದಯ ಶಸ್ತ್ರಚಿಕಿತ್ಸೆಗೆ ವಿನಿಯೋಗಿಸಲು ತೀರ್ಮಾನಿಸಲಾಗಿದೆ. “ನೀಡಿ ಹಾರ್ಟ್‌ ಫೌಂಡೇಷನ್‌’ ಮತ್ತು ರೋಟರಿ ಬೆಂಗಳೂರು ಸೌಥ್‌ ಈಸ್ಟ್‌ ಜೊತೆ ಸೇರಿ ಈ ಕಾರ್ಯಕ್ರಮ ಆಯೋಜಿಸಿದ್ದರು.

ಇದರಲ್ಲಿ ಡಾ. ಭಾರತಿ ವಿಷ್ಣುವರ್ಧನ್‌, ಸುಮಲತಾ ಅಂಬರೀಶ್‌, ಶಿವರಾಮಣ್ಣ, ಶಿವರಾಜಕುಮಾರ್‌, ಬಿ.ಕೆ. ಸುಮಿತ್ರಾ, ಪ್ರೇಮ, ಲಕ್ಷ್ಮೀ ಗೋಪಾಲಸ್ವಾಮಿ, ಭಾರ್ಗವ, ನವೀನ್‌ ಕೃಷ್ಣ, ಮಾಸ್ಟರ್‌ ಆನಂದ್‌, ಸುನೀಲ್‌ ರಾವ್‌, ಅರ್ಚನಾ ಉಡುಪ, ಶರ್ಮಿಳಾ ಮಲ್ನಾಡ್‌, ಸಿಂಚನ್‌ ದೀಕ್ಷಿತ್‌, ಕೀರ್ತಿ ಅನಿರುದ್ಧ, ಸುಂದರ್‌ ರಾಜ್‌, ಮೇಘನಾ ರಾಜ್‌ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next