Advertisement

ಡಾ|ಶ್ರೀನಿವಾಸ ಮುತಾಲಿಕ್‌ ಅವರಿಗೆ ಯುವ ವಿಜ್ಞಾನಿ ಪ್ರಶಸ್ತಿ

11:55 PM Mar 27, 2023 | Team Udayavani |

ಉಡುಪಿ: ಮಾಹೆ ವಿ.ವಿ. ಮಣಿಪಾಲದ ಕಾಲೇಜ್‌ ಆಫ್ ಫಾರ್ಮಾಸುಟಿಕಲ್‌ ಸೈನ್ಸಸ್‌ನ ಫಾರ್ಮಾಸುಟಿಕ್ಸ್‌ ವಿಭಾಗದ ಮುಖ್ಯಸ್ಥ ಡಾ| ಶ್ರೀನಿವಾಸ ಮುತಾಲಿಕ್‌ ಅವರು ಜೀವವಿಜ್ಞಾನ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ರಾಜ್ಯ ಸರಕಾರದ ಸರ್‌ ಸಿ.ವಿ. ರಾಮನ್‌ ಯುವ ವಿಜ್ಞಾನ ರಾಜ್ಯ ಪ್ರಶಸ್ತಿಯನ್ನು ಮಾ. 23ರಂದು ಬೆಂಗಳೂರಿನ ಐಐಎಸ್‌ಸಿಯ ಜೆ.ಎನ್‌. ಟಾಟಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಡಾ| ಸಿ.ಎನ್‌. ಅಶ್ವತ್ಥನಾರಾಯಣ ಅವರು ಭಾರತರತ್ನ ಪ್ರೊ| ಸಿ.ಎನ್‌.ಆರ್‌. ರಾವ್‌ ಅವರ ಸಮ್ಮುಖದಲ್ಲಿ ಪ್ರದಾನ ಮಾಡಿದರು.
ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್‌. ಕಿರಣ್‌ ಕುಮಾರ್‌, ಐಐಎಸ್‌ಸಿ ನಿರ್ದೇಶಕ ಡಾ| ಗೋವಿಂದನ್‌ ರಂಗರಾಜನ್‌, ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಡಾ| ಇ.ವಿ. ರಮಣ ರೆಡ್ಡಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next