Advertisement

ಡಾ.ಶಿವಕುಮಾರ ಶ್ರೀಗೆ ಇಂದು ಶಸ್ತ್ರಚಿಕಿತ್ಸೆ

06:00 AM Dec 08, 2018 | Team Udayavani |

ತುಮಕೂರು: ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಅಳವಡಿಸಿರುವ ಸ್ಟrಂಟ್‌ನಿಂದ ಪದೇ ಪದೆ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಶುಕ್ರವಾರ ಬೆಳಗ್ಗೆ ಚೆನ್ನೈಗೆ ಕರೆದುಕೊಂಡು ಹೋಗಲಾಗಿದ್ದು, ಶನಿ ವಾರ ಶಸ್ತ್ರಚಿಕಿತ್ಸೆ ನಡೆಯುವ ಸಾಧ್ಯತೆ ಇದೆ. ಶ್ರೀಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಮಠದ ಮೂಲಗಳು ತಿಳಿಸಿವೆ.

Advertisement

ಶ್ರೀಗಳನ್ನು ಏರ್‌ ಆ್ಯಂಬುಲೆನ್ಸ್‌ ಮೂಲಕ ಚೆನ್ನೈಗೆ ಕರೆದೊಯ್ಯಲಾಗಿದ್ದು, ಮಠದಿಂದ ಬೆಳಗ್ಗೆ 10:20ಕ್ಕೆ ಸ್ವತಃ ನಡೆದು ಬಂದು, ಕಾರಿನಲ್ಲಿ ಬೆಂಗಳೂರಿನ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.  ಶ್ರೀಗಳ ಜತೆ ಕಿರಿಯ ಶ್ರೀಗಳಾದ ಸಿದ್ಧಲಿಂಗ ಸ್ವಾಮೀಜಿ, ವೈದ್ಯರಾದ ಡಾ.ಪರಮೇಶ್ವರ್‌ ಮತ್ತು ಡಾ.ಶಾಲಿನಿ ಹಾಗೂ ಅವರ ಇಬ್ಬರು ಸಹಾಯಕರೂ ಪ್ರಯಾಣಿಸಿದ್ದಾರೆ.

ತಜ್ಞ ವೈದ್ಯರಿಂದ ಚಿಕಿತ್ಸೆ:
ವಿಶ್ವ ದರ್ಜೆಯ ಸೌಲಭ್ಯ ಹೊಂದಿರುವ ಡಾ.ರೇಲಾ ಇನ್‌ಸ್ಟಿಟ್ಯೂಟ್‌ ಆಫ್ ಮೆಡಿಕಲ್‌ ಸೆಂಟರ್‌ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಶಸ್ತ್ರಚಿಕಿತ್ಸೆ ಮಾಡಲು ಸಿದ್ಧತೆ ನಡೆದಿದೆ. ಜನಪ್ರಿಯ ವೈದ್ಯ ಡಾ. ಮಹಮದ್‌ ರೇಲಾ ಅವರು ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.ಸ್ವಾಮೀಜಿಯವರಿಗೆ ಅಳವಡಿಸಿರುವ 11 ಸ್ಟೆಂಟ್‌ಗಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಇದರಿಂದಾಗಿ ಜ್ವರದಿಂದ ಬಳಲುತ್ತಿದ್ದಾರೆ. ಡಾ.ರೇಲಾ ಅವರು ಕಳೆದ ಎರಡು ವರ್ಷದ ಹಿಂದೆ ಶ್ರೀಗಳ ಆರೋಗ್ಯ ತಪಾಸಣೆ ಮಾಡಿದ್ದರು. ಶುಕ್ರವಾರವೂ ಅವರೇ ಶ್ರೀಗಳ ತಪಾಸಣೆ ಮಾಡಿದ್ದು, ಶನಿವಾರ ಶ್ರೀಗಳಿಗೆ ಶಸ್ತ್ರಚಿಕಿತ್ಸೆ ನಡೆಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ನಾಲ್ಕು ದಿನ ಚೆನ್ನೈನಲ್ಲೇ ಚಿಕಿತ್ಸೆ:
ಶ್ರೀಗಳಿಗೆ ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ಮೂರರಿಂದ ನಾಲ್ಕು ದಿನ ಚೆನ್ನೈನಲ್ಲೇ ಚಿಕಿತ್ಸೆ ನೀಡಬೇಕಾಗಬಹುದು ಎಂದು ಶ್ರೀಗಳ ಆಪ್ತ ವೈದ್ಯರಾದ ಡಾ.ಪರಮೇಶ್‌ ತಿಳಿಸಿದ್ದಾರೆ. ಶ್ರೀಗಳಿಗೆ ಇನ್ನು ಸ್ಟr‌ಂಟ್‌ ಅಳವಡಿಕೆ ಕಷ್ಟವಾಗುತ್ತದೆ ಎಂದು ಚೆನ್ನೈನ ವೈದ್ಯರ ಬಳಿ ಚರ್ಚಿಸಿದ್ದೆವು. ಕಾರಣ ಅವರನ್ನೇ ಕರೆದುಕೊಂಡು ಬನ್ನಿ, ಗುಣಪಡಿಸೋಣ ಎಂದು ಆಶ್ವಾಸನೆ ಕೊಟ್ಟಿದ್ದರಿಂದ ಚೆನ್ನೈಗೆ ಕರೆದುಕೊಂಡು ಹೋಗಲಾಗಿದೆ ಎಂದು ತಿಳಿಸಿದ್ದಾರೆ.

ಸಿದ್ದಗಂಗಾ ಶ್ರೀಗಳ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಈ ಕುರಿತು ಅಧಿಕಾರಿಗಳಿಗ ಸೂಚನೆ ನೀಡಿದ್ದೇನೆ. ಚೆನ್ನೈ ವೈದ್ಯರ ಜತೆಯೂ ಮಾತನಾಡಿ ಶ್ರೀಗಳ ಆರೋಗ್ಯದ ಸ್ಥಿತಿಗತಿ ಮಾಹಿತಿ ಪಡೆದಿದ್ದೇನೆ.
-ಎಚ್‌.ಡಿ. ಕುಮಾರಸ್ವಾಮಿ, ಸಿಎಂಘಿಆ

Advertisement
Advertisement

Udayavani is now on Telegram. Click here to join our channel and stay updated with the latest news.

Next