Advertisement

ಡಾ.ರಾಜ್‌ಕುಮಾರ್‌ ಅಪಹರಣ ಕೇಸ್‌;ಎಲ್ಲಾ 9 ಆರೋಪಿಗಳು ಖುಲಾಸೆ

11:26 AM Sep 25, 2018 | Team Udayavani |

ಈರೋಡ್‌: ವರನಟ ಡಾ.ರಾಜ್‌ ಕುಮಾರ್‌ ಅವರ ಅಪಹರಣ ಪ್ರಕರಣದ ಎಲ್ಲಾ 9 ಮಂದಿ ಆರೋಪಿಗಳನ್ನು ಈರೋಡ್‌ನ‌  ಜಿಲ್ಲಾ ಕೋರ್ಟ್‌ ಮಂಗಳವಾರ ಖುಲಾಸೆಗೊಳಿಸಿದೆ. 

Advertisement

ಪ್ರಾಸಿಕ್ಯೂಶನ್‌ ಮತ್ತು ಪೊಲೀಸ್‌ ಇಲಾಖೆ ಅಪಹರಣದ ಕುರಿತು ಸಾಕ್ಷ್ಯ ನೀಡುವಲ್ಲಿ ವಿಫ‌ಲವಾದ ಹಿನ್ನಲೆಯಲ್ಲಿ  ಎಲ್ಲಾ 9 ಆರೋಪಿಗಳನ್ನು ಖುಲಾಸೆಗೊಳಿಸಿದೆ. 

18 ವರ್ಷಗಳ ಹಿಂದೆ 30 ಜುಲೈ 2000 ದಲ್ಲಿ , ಕುಖ್ಯಾತ ದಂತಚೋರ, ನರಹಂತಕ ವೀರಪ್ಪನ್‌  ಡಾ.ರಾಜ್ ಅವರನ್ನು  ಗಾಜನೂರಿನಲ್ಲಿನ  ತೋಟದ ಮನೆಯಿಂದ ಅಪಹರಿಸಿದ್ದ. ಡಾ.ರಾಜ್ ಅವರೊಂದಿಗೆ ಅವರ ಅಳಿಯ ಗೋವಿಂದರಾಜು ಮತ್ತು ನಾಗಪ್ಪ ಮಾರಡಗಿ ಅವರೂ ಕೂಡ ಅಪಹರಣಕ್ಕೊಳಗಾಗಿದ್ದರು.  108 ದಿನಗಳ ಬಳಿಕ ಬಿಡುಗಡೆ ಮಾಡಲಾಗಿತ್ತು. 

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next