Advertisement

ನೂತನ ತಂತ್ರಜ್ಞಾನದಲ್ಲಿ ಡಾ.ರಾಜ್ ಚಿತ್ರ

07:27 AM Jul 03, 2020 | Lakshmi GovindaRaj |

ಚಂದನವನದಲ್ಲಿ ಕನ್ನಡ ಪ್ರೇಕ್ಷಕರು ಎಂದಿಗೂ ಮರೆಯಲಾಗದ ಚಿತ್ರ ಡಾ.ರಾಜ್‌ಕುಮಾರ್ ಅಭಿನಯದ “ಭಾಗ್ಯವಂತರು’. ಹೌದು! ಈ ಚಿತ್ರ ನೂತನ ತಂತ್ರಜ್ಞಾನದಲ್ಲಿ ಮತ್ತೆ ಬಿಡುಗಡೆಯಾಗಲು ಸಿದ್ಧವಾಗಿದ್ದು, ಶ್ರೀ ಮುನೇಶ್ವರ ಫಿಲಂಸ್ ಮಾಲೀಕರಾದ ಎಂ. ಮುನಿರಾಜು ಈ ಪ್ರಯತ್ನದಲ್ಲಿದ್ದಾರೆ. ಕೋವಿಡ್‌ 19 ನಿವಾರಣೆಯಾದ ಬಳಿಕ ರಾಜ್ಯದ ಅಭಿಮಾನಿಗಳಿಗೆ ಭರ್ಜರಿ ಕೊಡುಗೆ ನೀಡಲಿದ್ದಾರೆ.

Advertisement

ಅಲ್ಲದೇ ದ್ವಾರಕೀಶ್ ಬ್ಯಾನರ್‌ನಲ್ಲಿ ತೆರೆಕಂಡು ಯಶಸ್ವಿಯಾದ ಈ ಚಿತ್ರ ಇಂದಿನ ತಂತ್ರಜ್ಞಾನ ಸಿನಿಮಾಸ್ಕೋಪ್ 7.1ಡಿ.ಐ ಬಳಸಿಕೊಳ್ಳಲಾಗಿದೆ. ದ್ವಾರಕೀಶ್ ನಿರ್ಮಾಣದ ಈ ಚಿತ್ರವನ್ನು ಭಾರ್ಗವ ನಿರ್ದೇಶಿಸಿದ್ದು, ರಾಜ್ ಕುಮಾರ್, ಬಿ. ಸರೋಜಾದೇವಿ, ಅಶೋಕ್ ಮೊದಲಾದವರು ಅಭಿನಯಿಸಿದ್ದ ಸೂಪರ್ ಹಿಟ್ ಚಿತ್ರ. ಚಿ. ಉದಯಶಂಕರ್ ಸಂಗೀತ ಸಂಯೋಜನೆ, ರಾಜನ್-ನಾಗೇಂದ್ರ ಜೋಡಿಯ ಸಾಹಿತ್ಯ ಚಿತ್ರಕ್ಕಿದೆ.

ಇನ್ನು ಈ ಚಿತ್ರವನ್ನು ಮತ್ತೆ ಅಭಿಮಾನಿಗಳ ಮನರಂಜಿಸಲು ವಿಶಾಲ ಕರ್ನಾಟಕಕ್ಕೆ ಹಂಚಿಕೆ ಮಾಡಲು ಶ್ರೀ ಮುನೇಶ್ವರ ಫಿಲಂಸ್ ನ ಎಂ. ಮುನಿರಾಜು ಮುಂದಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next