Advertisement
ಈ ಇಳಿ ವಯಸ್ಸಿನಲ್ಲೂ ರಾಜ್ಯದ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಕೌನ್ಸೆಲಿಂಗ್ ನೀಡುತ್ತಾರೆ. ಶಿಕ್ಷಕರಿಗೆ ಪಾಠ ಮಾಡುವ ಕುರಿತು ಕಾರ್ಯಾಗಾರಗಳನ್ನು ನಡೆಸುತ್ತಾರೆ. ಅಲ್ಲದೆ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಪ್ರತಿಭಾವಂತ ಬಡ ಮಕ್ಕಳನ್ನು ಗುರುತಿಸಿ ಅವರಿಗೆ ಆಸರೆಯಾಗುತ್ತಾರೆ. ಯಾವುದಕ್ಕೂ ಅವರು ಇನ್ನೊಬರಿಂದ ಪ್ರತಿಫಲಾಪೇಕ್ಷೆ ಬಯಸಿಲ್ಲ. ಹುಯಿಲಗೋಳ ನಾರಾಯಣರಾಯರು ಗದಗಿನಲ್ಲಿ ನಿರ್ಮಿಸಿದ ವಿದ್ಯಾದಾನ ಸಮಿತಿ ಶಾಲೆಯಲ್ಲಿ 1960ರಲ್ಲಿ ಶಿಕ್ಷಕಿ ವೃತ್ತಿಯನ್ನು ಪ್ರಾರಂಭಿಸಿದ ಅವರು, ಮೂರೂವರೆ ವರ್ಷ ಗದಗಿನ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದರು. ಮದುವೆ ಬಳಿಕ ಮುಂಬೈಗೆ ತೆರಳಿದ ನಂತರವೂ ಶಿಕ್ಷಕಿ ವೃತ್ತಿಯನ್ನು ಮುಂದುವರಿಸಿದರು. ಪತಿ ಐಐಟಿಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ತಮಗೆ ಮಕ್ಕಳಾಗಲಿಲ್ಲ ಎಂಬ ಕೊರಗು ಅವರಿಗಿತ್ತು. ಮುಂಬೈನ ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಲು ಆರಂಭಿಸಿದ ಅವರು, ತಮ್ಮ ಕೊರಗನ್ನು ನಿವಾರಿಸಿಕೊಂಡು ಈಗ ಸಾವಿರಾರು ಮಕ್ಕಳಿಗೆ ಅಮ್ಮನಂತಾಗಿದ್ದಾರೆ. ಕೇಂದ್ರದ ಮಾಜಿ ಸಚಿವ ಜೈರಾಮ್ ರಮೇಶ್, ರಾಜ್ಯದ ಮಾಜಿ ಸಚಿವ ಎಚ್. ಕೆ.ಪಾಟೀಲ್, ವೈದ್ಯಕೀಯ ಕ್ಷೇತ್ರದಲ್ಲಿ ಚಿನ್ನದ ಪದಕ ಗಳಿಸಿರುವ ಮುಂಬೈನ ಜ್ಯೋತಿ ದಾಸ್ ಸೇರಿ ದೇಶ ವಿದೇಶದಲ್ಲಿ ಅತ್ಯುನ್ನತ ಸಾಧನೆ ಮಾಡಿರುವ ಅನೇಕ ಮಂದಿ ಇವರ ವಿದ್ಯಾರ್ಥಿಗಳು.
70-80ರ ದಶಕದಲ್ಲಿ ಇವರು ಶಾಲಾ ಮಕ್ಕಳಿಗೆ ಮಾಡಿದ್ದ ನೃತ್ಯ ನಿರ್ದೇಶನಕ್ಕೆ ರಾಷ್ಟ್ರೀಯ ಪ್ರಶಸ್ತಿಗಳು ಬಂದಿವೆ. ನಾರಾಯಣರಾಯರ ಬದುಕು, ಬರಹ ಸೇರಿ 13 ಕೃತಿಗಳನ್ನು ರಚಿಸಿದ್ದಾರೆ. “ಅಂತೂ ಕಣ್ಣ ತೆರೆದವು’ ಕೃತಿಗೆ ಕಾಸರಗೋಡು ಸಾಹಿತ್ಯ ಸಂಘದ ಪ್ರಶಸ್ತಿ ಹಾಗೂ ವಿಕಾಸ ಕೃತಿಗೆ ಅತ್ತಿಮಬ್ಬೆ ಪ್ರಶಸ್ತಿಸಂದಿದೆ. ಪ್ಲೇ ವೈಲ್ ಲರ್ನಿಂಗ್ ಎಂಬ ಮಾದರಿಯಲ್ಲಿ ಕಲಿಕೆಗೆ ಸಹಕಾರಿಯಾಗುವಂತಹ 12 ಆಟಿಕೆಗಳನ್ನು ಸಿದಟಛಿಪಡಿಸಿ ಇವರು ಯಶಸ್ವಿಯಾಗಿದ್ದು, ಶಿಕ್ಷಣಕ್ಕೆ ಸಂಬಂಧಿಸಿದಂತೆ ರಾಷ್ಟ್ರಮಟ್ಟದಲ್ಲಿ 3 ವಿಷಯಗಳನ್ನು ಮಂಡಿಸಿ ಬಹುಮಾನ ಗಳಿಸಿದ್ದಾರೆ. ಬಿ.ಡಿ.ಜತ್ತಿ ಅವರಿಂದ ರಾಷ್ಟ್ರೀಯ ಪುರಸ್ಕಾರವೂ ಸಂದಿದೆ. ಇವರ ಸಾಧನೆ ಗಮನಿಸಿ ಕೇಂದ್ರ ಸರ್ಕಾರ 1998ರಲ್ಲಿ ಉತ್ತಮ ಶಿಕ್ಷಕಿ ರಾಷ್ಟ್ರಪ್ರಶಸ್ತಿ ನೀಡಿ ಗೌರವಿಸಿದೆ. 2015ರಲ್ಲಿ ಅಮೆರಿಕದ ಗ್ಲೋಬಲ್ ಪೀಸ್ ಯುನಿವರ್ಸಿಟಿ ಹಾಗೂ 2018ರಲ್ಲಿ ಇಂಟರ್ನ್ಯಾಷನಲ್ ಓಪನ್ಯುನಿವರ್ಸಿಟಿ ಗೌರವ ಡಾಕ್ಟರೇಟ್ ನೀಡಿವೆ.
Related Articles
ರಾಧಾ ಕುಲಕರ್ಣಿ ನಿವೃತ್ತ ಶಿಕ್ಷಕಿ
Advertisement
ಶ್ರುತಿ ಮಲೆನಾಡತಿ