Advertisement

ಮನೋಹರ ಗ್ರಂಥಮಾಲೆಗೆ ಡಾ|ಶಿವರಾಮ ಕಾರಂತ ಪ್ರಶಸ್ತಿ

03:45 AM Feb 16, 2017 | Team Udayavani |

ಧಾರವಾಡ: ದೆಹಲಿ ಕರ್ನಾಟಕ ಸಂಘವು 2 ವರ್ಷಕ್ಕೊಮ್ಮೆ ನೀಡುವ ಡಾ|ಶಿವರಾಮ ಕಾರಂತ ಪ್ರಶಸ್ತಿಯನ್ನು ಧಾರವಾಡದ ಮನೋಹರ ಗ್ರಂಥಮಾಲೆಗೆ ನೀಡಿ ಗೌರವಿಸಲಾಗಿದೆ.

Advertisement

2015ರ ಸಾಲಿಗೆ ಈ ಪ್ರಶಸ್ತಿಯನ್ನು ಅತ್ಯುತ್ತಮ ಪ್ರಕಾಶನ ಸಂಸ್ಥೆಗೆ ನೀಡಬೇಕೆಂದು ಸಂಘ ನಿರ್ಧರಿಸಿತ್ತು. ಆಯ್ಕೆ ಸಮಿತಿಯ ಸದಸ್ಯರಾದ ಡಾ|ಸಚ್ಚಿದಾನಂದ ಮೂರ್ತಿ, ಡಾ|ಟಿ.ಎಸ್‌.ಸತ್ಯನಾಥ ಹಾಗೂ ಪೊÅ|ಪ್ರೇಮಶೇಖರ ಅವರ ನಿರ್ಣಯದಂತೆ ಧಾರವಾಡದ ಮನೋಹರ ಗ್ರಂಥಮಾಲೆಗೆ ಪ್ರಶಸ್ತಿ ನೀಡಲಾಗಿದೆ.

ದೆಹಲಿಯ ಕರ್ನಾಟಕ ಸಂಘದ ಸಭಾಭವನದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ನಿರ್ದೇಶಕ ಟಿ.ಎಸ್‌.ನಾಗಾಭರಣ ಅವರು ಗ್ರಂಥಮಾಲಾದ ಮುಖ್ಯಸ್ಥ ಡಾ| ರಮಾಕಾಂತ ಜೋಶಿ ಅವರಿಗೆ 50 ಸಾವಿರ ನಗದು ಒಳಗೊಂಡ ಪ್ರಶಸ್ತಿ ಪ್ರದಾನ ಮಾಡಿದರು. ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ, ಕೇಂದ್ರ ಲಲಿತ ಕಲಾ ಅಕಾಡೆಮಿ ಅಧ್ಯಕ್ಷ ಚಿ.ಸು.ಕೃಷ್ಣಶೆಟ್ಟಿ, ಉಪೂ³ರ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next